ಜನನ-ಮರಣ ನೋಂದಣಿ, ಇ-ಜನ್ಮ ತಂತ್ರಾಂಶ ನಿರ್ವಹಣೆ ಶಿಬಿರ

ದಾವಣಗೆರೆ, ನ.11- ಜನನ-ಮರಣ ನೋಂದಣಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಾಗೂ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಉದ್ಘಾಟಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಅಪರ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿ ವೈ.ಎಂ.ರಾಜೇಶ್ವರಿ ಮಾತನಾಡಿ, ಜನನ-ಮರಣ ನೋಂದ ಣಿಯು ಅತ್ಯಂತ ಮಹತ್ವದ ಕಾರ್ಯಕ್ರಮ ವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 928 ಜನನ-ಮರಣ ನೋಂದಣಿ ಘಟಕಗಳು ಹಾಗೂ 114 ಉಪನೋಂದಣಿ ಘಟಕಗಳು ಸೇರಿ ದಂತೆ ಒಟ್ಟಾಗಿ 1042 ಜನನ-ಮರಣ ನೋಂ ದಣಿ ಘಟಕಗಳಿವೆ. ಜನನ-ಮರಣ ಘಟನೆ ಗಳು ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿ ನೋಂದಣಿಯಾಗುತ್ತಿದ್ದು ಜನರಿಗೆ ಸಕಾಲ ದಲ್ಲಿ ಪ್ರಮಾಣ ಪತ್ರಗಳು ದೊರೆಯುತ್ತಿರು ವುದು ಈ ತಂತ್ರಾಂಶದ ವಿಶೇಷತೆ ಎಂದರು.

ಇ-ಜನ್ಮ ನೋಂದಣಿ ಕಾರ್ಯದಿಂದ ದೇಶದ ಜನಸಂಖ್ಯೆ ಜಿಲ್ಲಾವಾರು ಜನನ ಪ್ರಮಾಣವನ್ನು ಅಂದಾಜಿಸಲು, ನವಜಾತ ಶಿಶು ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯ ಕ್ರಮಗಳಿಗೆ, ವಿವಾಹ ವಯಸ್ಸಿನ ಅಧ್ಯಯನ, ಲಿಂಗಾನುಪಾತ ಅಂದಾಜಿಸಲು ಹಾಗೂ ಇನ್ನಿತರೆ ಜನಗಣತಿಯ ಪ್ರಮುಖ ಅಂಕಿ, ಅಂಶಗಳನ್ನು ಪಡೆಯಲು ಹಾಗೂ ಯೋಜನೆ ಗಳನ್ನು ರೂಪಿಸಲು ನೋಂದಣಿ ಕಾರ್ಯ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.

ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ಅವರು ಮಾತನಾಡಿದರು. ಪಾಲಿಕೆಯ ಜನನ-ಮರಣ ನೋಂದಣಾಧಿಕಾರಿ ಕೆ.ಎಲ್. ಧರಣೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!