ಚೌಡೇಶ್ವರಿ ದೇವಸ್ಥಾನದಲ್ಲಿ ಗೋ ಪೂಜೆ

ರಾಣೇಬೆನ್ನೂರು, ನ.9- ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಗೋಧೂಳಿ ಸಮಯದಲ್ಲಿ ಗೋ ಪೂಜೆ ನಡೆಸಲಾಯಿತು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ನಗರಸಭೆಯಿಂದ ಆಯೋಜಿಸಿದ್ದ ಗೋ ಪೂಜೆಯಲ್ಲಿ ಶಾಸಕ ಅರುಣಕುಮಾರ ಪೂಜಾರ ಪಾಲ್ಗೊಂಡು ಗೋ ಪೂಜೆ ನೆರವೇರಿಸಿದರು.

ನಗರಸಭೆ ಅಧ್ಯಕ್ಷರಾದ ರೂಪಾ ಚಿನ್ನಿಕಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಉಪಾಧ್ಯಕ್ಷೆ ಕಸ್ತೂರಮ್ಮ ಚಿಕ್ಕಬಿದರಿ, ಸದಸ್ಯೆ ಪ್ರಭಾವತಿ ತಿಳವಳ್ಳಿ, ನಗರಸಭೆ ಆಯುಕ್ತ ಟಿ. ಉದಯಕುಮಾರ್‌, ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್. ಹುಬ್ಬಳ್ಳಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ, ಪವನ ಮಲ್ಲಾಡದ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಹಾಲೇಶ ಆರ್. ನಾಯಕ, ಗ್ರಾಮಲೆಕ್ಕಾಧಿಕಾರಿ ಅಶೋಕ ಅರಳೇಶ್ವರ, ರಾಜು ರಾಣೇಬೆನ್ನೂರ, ರಾಘವೇಂದ್ರ ಭಜಂತ್ರಿ ಇನ್ನಿತರರಿದ್ದರು.

error: Content is protected !!