20 ಅಡಿ ಉದ್ದದ ವಿವೇಕಾನಂದರ ಚಿತ್ರ ರಚಿಸಿದ ವಿದ್ಯಾರ್ಥಿಗಳು

20 ಅಡಿ ಉದ್ದದ ವಿವೇಕಾನಂದರ ಚಿತ್ರ ರಚಿಸಿದ ವಿದ್ಯಾರ್ಥಿಗಳು - Janathavaniದಾವಣಗೆರೆ, ಜ.12- ವೀರ ಸನ್ಯಾಸಿ ವಿವೇಕಾನಂದರ 159 ನೇ ಜಯಂತಿ ಹಾಗೂ ಯುವದಿನದ ಪ್ರಯುಕ್ತ ಸ್ಥಳೀಯ ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ ಯಲ್ಲಿ ವಿವೇಕಾನಂದರ ಚಿತ್ರ ಬಿಡಿಸುವ ಮೂಲಕ ಆಚರಿಸಲಾಯಿತು. 

ಮುರುಘರಾಜೇಂದ್ರ ಯೋಗ ಕೇಂದ್ರದವರು ಮಕ್ಕಳಿಗೆ ಸೂರ್ಯ ನಮಸ್ಕಾರವನ್ನು ತಿಳಿಸಿಕೊಡುವ ಸಮಯದಲ್ಲಿ ಶಾಲೆಯ 5 ವಿದ್ಯಾರ್ಥಿ ಗಳಾದ ಪ್ರಜ್ವಲ್‌ ಸಾಕ್ರೆ, ಹರೀಶ್‌, ಅಜಯ್‌ ಡಿ.ಎಸ್‌., ಮಣಿಕಂಠ, ಆಕಾಶ್‌ ಎಂ. ವಿದ್ಯಾರ್ಥಿಗಳು 20 ಅಡಿ ಉದ್ದ, 16 ಅಡಿ ಅಗಲದ ಇಟ್ಟಿಗೆ ತುಂಡುಗಳಿಂದ ವಿವೇಕಾನಂದರ ಭಾವಚಿತ್ರಣವನ್ನು ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಅವರ ಮಾರ್ಗದರ್ಶನದಲ್ಲಿ, ಮುಖ್ಯೋಪಾಧ್ಯಾಯರ ಪ್ರೋತ್ಸಾಹ ಶಿಕ್ಷಕರಾದ ಹೆಚ್‌.ಬಿ. ಜ್ಯೋತಿ, ಜಿ.ಎಂ. ಪ್ರಭುದೇವ್‌, ಕೆ. ಹಾಲಪ್ಪ, ಲಿಂಗರಾಜ್‌, ಕೆ.ಪಿ. ರುದ್ರೇಶ್‌ಮೂರ್ತಿ ಸಹಕಾರದಿಂದ ರಚಿಸಲಾಯಿತು. 

ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಆರ್‌. ವಾಗ್ದೇವಿ ಹಾಗೂ ಮುರುಘರಾಜೇಂದ್ರ ಯೋಗ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

error: Content is protected !!