ಸೆ. 11 ರಿಂದ ಮಹಾ ಕುಬೇರ ಯಾಗ

ದಾವಣಗೆರೆ, ಆ. 2- ಶಿವಶ್ರೀ ಮೀಡಿಯಾ ಪ್ರೈ.ಲಿ. ಹಾಗೂ ರಾಜ್ ನ್ಯೂಸ್, ರಾಜ್ ಮ್ಯೂಸಿಕ್ ವತಿಯಿಂದ 700 ವರ್ಷಗಳ ಬಳಿಕ ಲೋಕ ಕಲ್ಯಾಣಾರ್ಥವಾಗಿ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗವನ್ನು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಸೆ. 11 ರಿಂದ 21 ರವರೆಗೆ ನಡೆಯಲಿದೆ ಎಂದು ಶಿವಶ್ರೀ ಮೀಡಿಯಾದ ವಿಶೇಷ ಪ್ರತಿನಿಧಿ ಎಸ್.ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾಮಾರಿ ಕೊರೊನಾ ನಂತರ ಇಡೀ ಜಗತ್ತೇ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದು, ಹಿಂದೆಲ್ಲಾ ಆರ್ಥಿಕ ಸಮಸ್ಯೆಯ ನಿವಾರಣೆಗಾಗಿ ಲಕ್ಷ್ಮೀಯನ್ನು ಸಂತೃಪ್ತಿಪಡಿಸಲು ಕುಬೇರನನ್ನು ಪೂಜಿಸುತ್ತಿದ್ದರು. ಈ ನಿಟ್ಟಿನಲ್ಲಿ ನಾವು ಕುಬೇರ ಯಾಗವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಮುಖ್ಯ ಆಡಳಿತಾಧಿಕಾರಿ ಓಮೇಶ್ ಮೂರ್ತಿ ಮಾತನಾಡಿ, ಅರಮನೆ ಮೈದಾನದ 60 ಎಕರೆ ಪ್ರದೇಶದಲ್ಲಿ 24 ಗಂಟೆಗಳ ಕಾಲ ಹೋಮ ನಡೆಯಲಿದ್ದು, 208 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. 506 ಆಗಮಿಕರು ದೇಶದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಯಾಗಕ್ಕೆ ಕುಳಿತುಕೊಳ್ಳುವವರು ಐದು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ವಿವಿಧ ಸೇವೆಗಳ ಮೂಲಕ ಸೇವೆ ಸಲ್ಲಿಸಬಹುದು ಎಂದರು. ವಿವರಕ್ಕೆ ರಾಜ್ ನ್ಯೂಸ್ ವರದಿಗಾರ ರಾಮಪ್ರಸಾದ್ (9060800775), ಶ್ರೀಶೈಲ ಮಠದ ವ್ಯವಸ್ಥಾಪಕ ಬನ್ನಯ್ಯ ಶಾಸ್ತ್ರಿ (9986922077 ಅವರನ್ನು ಸಂಪರ್ಕಿಸಬಹುದು.

error: Content is protected !!