ದಾವಣಗೆರೆ, ಜೂ.23- ಜಿಲ್ಲೆಯ ತಾಲ್ಲೂಕುಗಳಲ್ಲಿ ನೆಲ, ಜಲ, ಪರಿಸರ ಹಾಗೂ ಕೆರೆ ಸಂರಕ್ಷಣೆ ವಿಚಾರದಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರ ತುರ್ತು ಸಭೆ ಕರೆದು ಚರ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ನೆಲ, ಜಲ, ಪರಿಸರ ಹಾಗೂ ಕೆರೆ ಸಂರಕ್ಷಣಾ ಆಂದೋಲನ ಸಮಿತಿಯ ಜಿಲ್ಲಾ ಸಂಚಾಲಕರಾದ ರಾಂಪುರದ ಬಸವರಾಜ, ಕೆ.ಎಸ್.ಪ್ರಸಾದ್, ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ್, ಜಿಲ್ಲಾ ಸಂಚಾಲಕರಾದ ಮಾಯಕೊಂಡ ಅಶೋಕ, ಅಣಬೇರು ಕುಮಾರಸ್ವಾಮಿ, ತಾಲ್ಲೂಕು ಸಂಚಾಲಕರಾದ ಪ್ರತಾಪ್ ಮಾಯಕೊಂಡ ಮತ್ತು ಶಿವಮೂರ್ತಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
July 5, 2024