ಜಯಲಕ್ಷ್ಮಿ ಕಾರಂತ್‌ಗೆ `ರಂಗ ಚಿನ್ನಾರಿ’ ಪ್ರಶಸ್ತಿ

ಜಯಲಕ್ಷ್ಮಿ ಕಾರಂತ್‌ಗೆ `ರಂಗ ಚಿನ್ನಾರಿ' ಪ್ರಶಸ್ತಿ - Janathavaniದಾವಣಗೆರೆ, ಮೇ 21- ಗಡಿನಾಡಿನಲ್ಲಿ   ಯಕ್ಷಗಾನ, ಗಮಕ  ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಚೇತನ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ ಅವರಿಗೆ `ರಂಗ ಚಿನ್ನಾರಿ’ರಾಜ್ಯ ಪ್ರಶಸ್ತಿ ನೀಡಲಾಗಿದೆ.   ಕೇರಳದ ಕಾಸರಗೋಡಿನ `ರಂಗ ಚಿನ್ನಾರಿ’ ಸಾಂಸ್ಕೃ ತಿಕ  ಸಂಸ್ಥೆಯ ಈ ಪ್ರಶಸ್ತಿಯನ್ನು ಎಡೆನೀರು ಮಠದ ಸಭಾಂಗಣದಲ್ಲಿ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿನ್ನೆ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ  ಪ್ರದಾನ ಮಾಡಲಾಯಿತು.

error: Content is protected !!