ಯುವ ವಿಜ್ಞಾನಿ ಎಂದು ಗುರುತಿಸಿಕೊಂಡಿರುವ ಮಂಡ್ಯದ ಡ್ರೋನ್ ಪ್ರತಾಪ್ 8 ದಿನಗಳ ಕಾಲ ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರೆಂಬ ವಿಚಾರ ತಡವಾಗಿ ತಿಳಿದು ಬಂದಿದೆ.
25 ಪಾಸಿಟಿವ್, 11 ಬಿಡುಗಡೆ
ಜಿಲ್ಲೆಯಲ್ಲಿ ಗುರುವಾರ 25 ಕೊರೊನಾ ಪ್ರಕರಣಗಳು ಕಾಣಿಸಿ ಕೊಂಡಿದ್ದು, ಇದೇ ದಿನ 11 ಜನ ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
ಮಲೇಬೆನ್ನೂರಿನಲ್ಲಿ ಖಾತೆ ತೆರೆದ ಕೊರೊನಾ: ಇಬ್ಬರಿಗೆ ಸೋಂಕು
ಇದುವರೆಗೂ ಕೊರೊನಾ ಮುಕ್ತವಾಗಿದ್ದ ಮಲೇಬೆನ್ನೂರು ಪಟ್ಟ ಣದಲ್ಲಿ ಗುರುವಾರ ಎರಡು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ.
ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಗುಂಡಿಟ್ಟು ಸ್ನೇಹಿತನ ಹತ್ಯೆ
ಹಣಕಾಸಿನ ವಿಚಾರವಾಗಿ ಸ್ನೇಹಿತನೇ ಯುವಕನನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿತನನ್ನು ಬಂಧಿಸಿ, ಒಂದು ಪಿಸ್ತೂಲು ಮತ್ತು ಐದು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಲಿಖಿತ ಆದೇಶ ಬರದಿದ್ದರೆ ಮತ್ತೆ ಮುಷ್ಕರ
ತಮಗೆ ಶಿಷ್ಯ ವೇತನ ನೀಡುವ ಬಗ್ಗೆ ಸರ್ಕಾರವು ಲಿಖಿತ ಆದೇಶವನ್ನು ಸೋಮವಾರದ ಒಳಗೆ ನೀಡಬೇಕು. ಇಲ್ಲದಿದ್ದರೆ ಮತ್ತೆ ಅನಿವಾರ್ಯವಾಗಿ ರಸ್ತೆಗಿಳಿದು ಮುಷ್ಕರ ನಡೆಸುತ್ತೇವೆ ಎಂದು ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ಹರಿಹರ ತಾಲ್ಲೂಕು ರೈತರ ಖಾತೆಗೆ ಬೆಳೆ ಹಾನಿ ಬಾಕಿ 2.55 ಕೋಟಿ ರೂ.ಜಮಾ
ಹರಿಹರ : ತಾಲ್ಲೂಕಿನಲ್ಲಿ ಬೆಳೆ ಹಾನಿಯಾದ ರೈತರ ಬಾಕಿ ಒಟ್ಟು 2.55 ಕೋಟಿ ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದರು.
ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿನ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ 2024-25ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ಮೇ. 19 ರಂದು ನಡೆಸಲಾಗುವುದು.
ವಸತಿ ಶಾಲೆಯಲ್ಲಿನ 7, 8, 9ನೇ ತರಗತಿಗಳಿಗೆ ಅರ್ಜಿ ಆಹ್ವಾನ
ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಜಿಲ್ಲಾ ಹಂತದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡದಲ್ಲಿ ನಾಳೆ ದೈವಜ್ಞ ಸಮಾಜ ಸಂಘದ ಸರ್ವ ಸಾಧಾರಣ ಸಭೆ
ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿರುವ ದೈವಜ್ಞ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ (ಧಾರವಾಡ) ಇವರ ವತಿಯಿಂದ ನಾಡಿದ್ದು ದಿನಾಂಕ 19ರ ಭಾನುವಾರ ಸರ್ವ ಸಾಧಾರಣ ಸಭೆ (ಜಿಬಿ)ಯನ್ನು ಏರ್ಪಡಿಸಲಾಗಿದೆ.
ದೈವಜ್ಞ ವಿದ್ಯಾರ್ಥಿಗಳಿಗೆ ಎಸ್ಪಿಎಆರ್ ಪ್ರತಿಷ್ಠಾನದಿಂದ ಪುರಸ್ಕಾರ
ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಶೇ. 85 ರಷ್ಟು ಮತ್ತು ಅದಕ್ಕೂ ಹೆಚ್ಚು ಅಂಕ ಪಡೆದ ದೈವಜ್ಞ ಸಮಾಜ ಬಾಂಧವರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ `ಶಾರದಾ ಪುರಸ್ಕಾರ-2024' ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು
ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿಲ್ಲ
ಹರಿಹರ : ನಗರದಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಯಾವುದೇ ರೀತಿಯ ಅವಘಡ ಮತ್ತು ಸಾರ್ವಜನಿಕರಿಗೆ ತೊಂದರೆಗಳು ಸಂಭವಿಸಿರುವುದಿಲ್ಲ ಎಂದು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದರು.
ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯವು 2024-25ನೇ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಯುಜಿಸಿ ಅನುಮೋದನೆ ನೀಡಿದೆ ಎಂದು ಪ್ರಾಂಶು ಪಾಲ ಡಾ. ಹೆಚ್.ಬಿ. ಅರವಿಂದ್ ತಿಳಿಸಿದ್ದಾರೆ.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ವಾಸವಿ ಜಯಂತಿ
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಶ್ರೀ ದೇವಿಗೆ ಪಂಚರಂಗಿ ಅಲಂಕಾರ ಪೂಜೆ ನೆರವೇರಲಿದೆ.
ಪ್ರೊ. ಕೃಷ್ಣಪ್ಪ ಭವನದಲ್ಲಿ ಇಂದಿನಿಂದ ರಾಜ್ಯಮಟ್ಟದ ಕಾರ್ಯಾಗಾರ
ಹನಗವಾಡಿ ಸಮೀಪದ ಬೈಪಾಸ್ ರಸ್ತೆಯಲ್ಲಿರುವ ಪ್ರೊ. ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಇಂದು ಮತ್ತು ನಾಳೆ ಭಾನುವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ರಾಜ್ಯಮಟ್ಟದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ
ವೈಜ್ಞಾನಿಕ ಯುಗದಲ್ಲೂ ವೈದಿಕ ಸಂಸ್ಕೃತಿ : ಡಾ.ಬಸವರಾಜ ನೆಲ್ಲಿಸರ
ವೈಜ್ಞಾನಿಕ ಯುಗ ದಲ್ಲೂ ಹಲವಾರು ಮನೆ ಹಾಗೂ ಮಠಗಳಲ್ಲಿ ವೈದಿಕ ಸಂಸ್ಕೃತಿ ಜಾರಿಯಲ್ಲಿದೆ ಎಂದು ಸಂಸ್ಕೃತಿ ಚಿಂತಕ ಡಾ. ಬಸವರಾಜ ನೆಲ್ಲಿಸರ ಹೇಳಿದರು.
ಯೂರೋ ಸ್ಕೂಲ್ಗೆ ಶೇ. 100 ಫಲಿತಾಂಶ : ಅಧೀತ್ ಪ್ರಥಮ
2023-24ನೇ ಸಾಲಿನ ಐಸಿಎಸ್ಇ ಹತ್ತನೇ ತರಗತಿಯಲ್ಲಿ ನಗರದ ನಗರದ ಯುರೋ ಸ್ಕೂಲ್ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೆವಾಲ್ ಕ್ರಿಶನ್ ಗರ್ಗ್ ಜಿಲ್ಲೆಗೆ ಭೇಟಿ
ಪ್ರಧಾನ ಮಂತ್ರಿ ಸಡಕ್ ಯೋಜನೆ ಹಂತ-3ರಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳ ಪರಿವೀಕ್ಷಣೆಗಾಗಿ ಇದೇ ದಿನಾಂಕ 21 ರಿಂದ 24 ರವರೆಗೆ ಪಂಜಾಬ್ ಚಂಡೀಗಡದ ರಾಷ್ಟ್ರೀಯ ಗುಣ ನಿಯಂತ್ರಣ ಮಾನಿಟರ್ ಕೇಂದ್ರದ ಕೆವಾಲ್ ಕ್ರಿಶನ್ ಗರ್ಗ್ ಇವರು ಜಿಲ್ಲೆಗೆ ಆಗಮಿಸಿ ಪರೀವಿಕ್ಷಣೆ ನಡೆಸಲಿದ್ದಾರೆ.
ನಗರದಲ್ಲಿ ಇಂದು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಎಂಸಿಸಿ `ಬಿ' ಬ್ಲಾಕ್ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ 25ನೇ ವರ್ಷದ ಬ್ರಹ್ಮ ರಥೋತ್ಸವವು ಇಂದು ಬೆಳಿಗ್ಗೆ 11.45ಕ್ಕೆ ನೆರವೇರಲಿದೆ.
ದೈವಜ್ಞ ಸಮಾಜದ ಮಕ್ಕಳಿಗೆ ಪುರಸ್ಕಾರ
ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.85ರಷ್ಟು ಫಲಿತಾಂಶ ಪಡೆದ ದೈವಜ್ಞ ಸಮಾಜದ ಮಕ್ಕಳಿಗೆ `ಶಾರದಾ ಪುರಸ್ಕಾರ' ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ
ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸವಿತಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ರಾಜ್ಯ ಶಿಕ್ಷಣ ನೀತಿ ಸ್ವಾಗತಾರ್ಹ : ಡಾ. ಕುಬೇರಪ್ಪ
ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ, ರಾಜ್ಯದ ನೂತನ ಶಿಕ್ಷಣ ನೀತಿಯನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.
ವಿಕಲಚೇತನರ ಮಕ್ಕಳಿಗೆ 6ನೇ ತರಗತಿ ಪ್ರವೇಶಕ್ಕೆ ಅವಕಾಶ
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಇವರುಗಳ ವತಿಯಿಂದ ಭೂ ಸುಧಾರಣೆ ಹಾಗೂ ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ವತಿಯಿಂದ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಜಿಲ್ಲೆಯ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಂದ `ಸ್ವಾಭಿಮಾನ ಪ್ರತಿಭಾ ಪುರಸ್ಕಾರ'ಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹರಿಹರದಲ್ಲಿ ಅಪರಿಚಿತ ವ್ಯಕ್ತಿ ಸಾವು
ಹರಿಹರ : ನಗರದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ 50 ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಸಾವನ್ನಪಿದ್ದು, ಮೃತ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹರಿಹರ ಪೊಲೀಸ್ ಠಾಣೆಗೆ (08192 272016, 94808 03257)ಗೆ ಸಂಪರ್ಕಿಸಬಹುದು.
ಸಿರಿಗೆರೆಯ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು
ಸಿರಿಗೆರೆ : ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಇದೇ ದಿನಾಂಕ 20ರ ಸೋಮವಾರ ನಡೆಯಬೇಕಿದ್ದ ಸದ್ಧರ್ಮ ನ್ಯಾಯಪೀಠದ ಕಾರ್ಯ ಕಲಾಪಗಳನ್ನು ಮುಂದೂಡಲಾಗಿದೆ.
ಕಲಾಕುಂಚದಿಂದ ಪ್ರಬಂಧ ಸ್ಪರ್ಧೆ
ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಎಸ್ಎಸ್ಎಲ್ಸಿ : ಹರ್ಷಿತಾಗೆ ಶೇ. 96.96
ನಗರದ ಶ್ರೀ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಎಸ್. 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 606 ಅಂಕಗಳನ್ನು ಪಡೆದು ಶೇ. 96.96 ಫಲಿತಾಂಶ ಪಡೆದಿದ್ದಾರೆ.
ಬೆಳೆ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡದೆ ರೈತರ ಖಾತೆಗೆ ಜಮಾ ಮಾಡಲು ಶಾಸಕರ ಸೂಚನೆ
ರಾಣೇಬೆನ್ನೂರು : ರೈತರಿಗೆ ನೀಡಲಾಗುತ್ತಿರುವ ಬೆಳೆ ಪರಿಹಾರ ವಿಮಾ ಹಣವನ್ನು ಅವರ ಸಾಲದ ಕಂತುಗಳಿಗೆ ಜಮಾ ಮಾಡಿಕೊಳ್ಳದೆ, ಅವರ ಖಾತೆಗಳಿಗೆ ಜಮಾ ಮಾಡುವಂತೆ ಸರ್ಕಾರ ಆದೇಶ ಮಾಡಿದ್ದು, ಬ್ಯಾಂಕ್ ನವರಿಗೆ ಕಟ್ಟುನಿಟ್ಟಿನ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಎನ್.ಟಿ. ಎರ್ರಿಸ್ವಾಮಿ ಅವರ `ಬ್ಯಾಂಕಾಯಣ’ ಕೃತಿ ಲೋಕಾರ್ಪಣೆ
ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಾಯ ಮಾಡುವುದರಿಂದ ಬದುಕಿನಲ್ಲಿ ಸಂತೋಷ ಹಾಗೂ ಆತ್ಮತೃಪ್ತಿ ಕಂಡುಕೊಳ್ಳಬಹುದು ಎಂದು ಕೆನರಾ ಬ್ಯಾಂಕ್ನ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕಚಂದ್ರ ಹೇಳಿದರು.
ರೆಡ್ ಕ್ರಾಸ್ನಿಂದ ಆರೋಗ್ಯ ತಪಾಸಣೆ
ಕಾರ್ಮಿಕರ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್, ಅಲ್ಟ್ರಾಟೆಕ್ ಸಿಮೆಂಟ್, ವಾಸನ್ ಕಣ್ಣಿನ ಆಸ್ಪತ್ರೆ, ರಿಧಿ ದಂತ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಒಂದು ಒಳ್ಳೆಯ ಪುಸ್ತಕವು ನೂರು ಸ್ನೇಹಿತರ ಮೌಲ್ಯದ್ದಾಗಿದೆ. ನಮ್ಮ ಜೀವನದಲ್ಲಿ ಪುಸ್ತಕಗಳು ನಮ್ಮ ಗುರಿಗಳನ್ನು ಸಾಧಿಸಲು, ಸರಿಯಾದ ಹಾದಿಯಲ್ಲಿ ನಡೆಸಲು ಸಹಕಾರಿಯಾಗುತ್ತವೆ.
ಸೈಕಲ್ ಬಳಸಿ ಆರೋಗ್ಯ, ಆನಂದ, ಪರಿಸರ ರಕ್ಷಿಸಿ
ಸೈಕಲ್ ಸವಾರಿ ಮಾಡೋಣ, ಪೆಟ್ರೋಲ್, ಪರಿಸರ ಉಳಿಸೋಣ, ಸೈಕಲ್ ಸವಾರಿ ಆರೋಗ್ಯಕ್ಕೆ ರಹದಾರಿ. ಸಾಲ, ಕುಡಿತ, ತಂಬಾಕು ಸಾವಿಗೆ ರಹದಾರಿ, ಸದಾ ರೋಗಗಳು, ವಾಹನಗಳಿಂದ ದೂರವಿರಿ ಎಂಬ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಘೋಷ ವಾಕ್ಯಗಳನ್ನು ಒಳಗೊಂಡಿರುವ ಸೈಕಲ್ಗಳನ್ನು ಬಡವರಿಗಾಗಿ ನೀಡುತ್ತಿರುವುದು ಸಂತಸದ ವಿಷಯ.
ಜನಪ್ರಿಯ ಸೇವೆ ಮಾತ್ರ ನೆನಪಿನಲ್ಲಿ ಉಳಿಯುತ್ತದೆ
ಹರಪನಹಳ್ಳಿ : ಯಾವುದೇ ಸೇವೆ ಜನಪ್ರಿಯವಾಗಿದ್ದರೆ ಮಾತ್ರವೇ ಸದಾ ಜನರ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಬಿ.ಕೃಷ್ಣಮೂರ್ತಿ ಅಭಿಪ್ರಾಯಿಸಿದರು.
ಹೊಳೆಸಿರಿಗೆರೆ : ಉತ್ತಮ ಮಳೆಗಾಗಿ ಕತ್ತೆ ಮದುವೆ
ಮಲೇಬೆನ್ನೂರು : ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಉತ್ತಮ ಮಳೆ ಆಗುವಂತೆ ವರುಣ ದೇವನಿಗೆ ಪ್ರಾರ್ಥಿಸಿ, ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.
ಕೀಮ್ಸ್ನಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ನಗರದ ಚಿಣ್ಣರು
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಿಮ್ಸ್ ಶಿವ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಈಚೆಗೆ ಹುಬ್ಬಳ್ಳಿಯ ಗೋಲ್ಡನ್ ಜ್ಯುಬಿಲಿ ಹಾಲ್ನಲ್ಲಿ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ರಸ್ತೆ ಕಾಮಗಾರಿ ಅಪೂರ್ಣ : ವಾಹನ ಸವಾರರಿಗೆ ಸಂಕಷ್ಟ
ಮಲೇಬೆನ್ನೂರು : ಕಡರನಾಯ್ಕನ ಹಳ್ಳಿಯಿಂದ ಕೊಕ್ಕ ನೂರು, ಜಿ.ಟಿ ಕಟ್ಟೆ ಮಾರ್ಗವಾಗಿ ಮೂಗಿನಗೊಂದಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಅಪೂರ್ಣ ವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
11ನೇ ವರ್ಷದ ವಿಪ್ರ ವಟು ಶಿಕ್ಷಣ ಶಿಬಿರ
ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ 11ನೇ ವರ್ಷದ ವಿಪ್ರ ವಟು ಶಿಕ್ಷಣ ಶಿಬಿರವನ್ನು ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ನಡೆಸಲಾಗುತ್ತಿದೆ.
ರೈತರ ಸಾವಿಗೆ ಸ್ಪಂದಿಸಿ : ರವೀಂದ್ರಗೌಡ
ರಾಣೇಬೆನ್ನೂರು : ರೈತರ ಸಮಸ್ಯೆ ಮತ್ತು ಆತ್ಮಹತ್ಯೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ ಕರೂರು ಗ್ರಾಮಸ್ಥ ರೊಂದಿಗೆ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ್ ಶವದೊಂದಿಗೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಅಪ್ಸಾನ ಬಾನುಗೆ ಮುಸ್ಲಿಂ ನೌಕರರ ಸಂಘದಿಂದ ಸನ್ಮಾನ
ಹರಪನಹಳ್ಳಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನ ಪಡೆದಿರುವ ಪಿ. ಅಪ್ಸಾನ ಬಾನು ಅವರನ್ನು ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬಸವಗಿರಿಯಲ್ಲಿ ಚಿತ್ರಿಕಿ ಶಿವಕುಮಾರ್ ದಂಪತಿಗೆ ಸನ್ಮಾನ
ನಗರದ ಚಿತ್ರಿಕಿ ಶಿವಕುಮಾರ್ ಅವರು ಮಹಾ ರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿಯ ಯೋಗಾಂಗ ತ್ರಿವಿಧಿ ವಚನಗಳನ್ನು ಹಾಡಿದರು.
ಸಮಾಜದಲ್ಲಿ ಅನಿಷ್ಠ ಪದ್ದತಿ ಹೋಗಲಾಡಿಸಿದ ಸಂತ ಚನ್ನವೀರಸ್ವಾಮಿ
ಹರಪನಹಳ್ಳಿ : ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿದ ಮಹಾನ್ ಸಂತ ಚನ್ನವೀರಸ್ವಾಮಿ ಎಂದು ಮುಂಡರಿಗಿಯ ನಾಡೋಜ ಶ್ರೀ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು.
ರಾಣೇಬೆನ್ನೂರು : ಕವಿ ಮಾಗಿ ಬಾಗದ ಹೊರತು ಕಾವ್ಯ ರಚನೆ ಸಾಧ್ಯವಿಲ್ಲ
ರಾಣೇಬೆನ್ನೂರು : ಕಾವ್ಯ ದಿಢೀರಾದ ಹುಟ್ಟಲಾರದು. ಕವಿಯು ಮಾಗಿ ಬಾಗದ ಹೊರತು ಗಟ್ಟಿ ಕಾವ್ಯ ರಚನೆ ಸಾಧ್ಯವಾಗದು. ಕಾವ್ಯ ಮನಸ್ಸಿಗೆ ಮುಟ್ಟುವಂತಿರಬೇಕು ಎಂದು ಹಾವೇರಿಯ ಕವಯತ್ರಿ ಡಾ. ಪುಷ್ಪಾ ಶಲವಡಿಮಠ ಹೇಳಿದರು.
ಬಸವ ಪ್ರಜ್ಞೆ, ತತ್ವ ಸಿದ್ಧಾಂತ ಆಚರಣೆಗೆ ಬರಬೇಕು
ಸಾಣೇಹಳ್ಳಿ : ಬಸವಣ್ಣನವರನ್ನು ಪೂಜೆಗೆ ಸೀಮಿತಗೊಳಿಸದೇ ಬಸವ ಪ್ರಜ್ಞೆ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ಆಚರಣೆಗೆ ತರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ ಹೇಳಿದರು.
ಸಂಗೀತದಿಂದ ಮನಸ್ಸಿನ ಖಿನ್ನತೆ ಮಾಯ
ಸಂಗೀತಕ್ಕೆ ಮನಸ್ಸಿನ ಖಿನ್ನತೆ ವಾಸಿ ಮಾಡುವ ಗುಣವಿದೆ ಎಂದು ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಹೇಳಿದರು.
ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಣೆ ಕೌಶಲ್ಯ ಮುಖ್ಯ
ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಸ್ವಯಂ ಪ್ರೇರಣೆ, ಸಮಯ ನಿರ್ವಹಣೆ ಮತ್ತು ನಿರ್ಣಾಯಕ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವಂತೆ ಬೋಶ್ ಇಂಡಿಯಾ ಫೌಂಡೇಶನ್ನ ಡಾ.ಓ.ಪಿ ಗೋಯಲ್ ಸಲಹೆ ನೀಡಿದರು.
ಸರ್ಕಾರಿ ಕಛೇರಿಗಳಿಂದ ತೊಂದರೆಯಾದರೆ ನಿರ್ಭೀತಿಯಿಂದ ದೂರು ಸಲ್ಲಿಸಲು ಕರೆ
ಹೊನ್ನಾಳಿ : ಸರ್ಕಾರಿ ಅಧಿಕಾರಿಗಳು ವಿಳಂಬ ಧೋರಣೆ ತೋರದೇ ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಸೂಚಿಸಿದರು.
ಪೌರ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ವ್ಯವಸ್ಥಿತವಾಗಿ ತಲುಪಿಸಿ
ಹೊನ್ನಾಳಿ : ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪ ಕವಾಗಿ ವಿತರಿಸಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಸೂಚಿಸಿದರು.
ವಚನ ಸಾಹಿತ್ಯ ಜೀವನ ಮೌಲ್ಯಗಳ ಭಂಡಾರ
12ನೇಯ ಶತಮಾನದ ವಚನ ಸಾಹಿತ್ಯ ಜೀವನ ಮೌಲ್ಯಗಳ ಭಂಡಾರವಾಗಿದೆ. ವಚನಕಾರರು ಸಾರಿದ ಕಾಯಕ ಮತ್ತು ದಾಸೋಹ ನಮ್ಮ ನೆಲದ ಸರ್ವ ಶ್ರೇಷ್ಠ ಜೀವನ ಮೌಲ್ಯವಾಗಿದೆ ಎಂದು ಎಚ್.ಕೆ ಲಿಂಗರಾಜ್ ಅಭಿಪ್ರಾಯ ಪಟ್ಟರು.
ಹಾರಕನಾಳು ಗ್ರಾಮದ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ
ಹರಪನಹಳ್ಳಿ : ತಾಲ್ಲೂಕಿನ ಹಾರಕನಾಳು ಗ್ರಾಮದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸ ಲಾಯಿತು.
ಎ.ಆರ್.ಎಂ. ಕಾಲೇಜಿನಲ್ಲಿ ಬಸವ ಜಯಂತಿ
ಇಲ್ಲಿನ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಬಸವರಾಜ್ ಗುರೂಜಿಯಿಂದ ವಿಶೇಷ ಅಭಿಷೇಕ
ನಗರದ ಶಿವಕುಮಾರಸ್ವಾಮಿ ಬಡಾವಣೆಯ ವೀರಾಂಜನೇಯ ಸ್ವಾಮಿ ಸಾರ್ವಜನಿಕ ಧ್ಯಾನ ಮಂದಿರದಲ್ಲಿ ಶನಿವಾರ ಹನುಮಾವತಾರಿ ಬಸವರಾಜ ಗುರೂಜಿ ಅವರು ವೀರಭದ್ರೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಓಂಕಾರ ಗಣಪತಿ, ಸುಬ್ರಹ್ಮಣ್ಯಸ್ವಾಮಿ, ವರಾಹ ಭೀಮಾಶಂಕರ ಲಿಂಗುವಿಗೆ ವಿಶೇಷ ಗಂಗಾ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕವನ್ನು ನೆರವೇರಿಸಿದರು.
ದ್ವಾರಕೀಶ್ ಅವರಿಗೆ `ಸಿನಿಮಾ ಸಿರಿ’ ಸಂಸ್ಥೆಯಿಂದ ಶ್ರದ್ಧಾಂಜಲಿ
ಇತ್ತೀಚೆಗೆ ವಿಧಿವಶರಾದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿ|| ದ್ವಾರಕೀಶ್ ರವರಿಗೆ ಸಿನಿಮಾ ಸಿರಿ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಯಕದ ಮಹತ್ವ ಸಾರಿದ ವಿಶ್ವಗುರು ಬಸವಣ್ಣ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಪ್ರಜ್ಞಾ ವೇದಿಕೆ ವನಿತಾ ಸಮಾಜ, ವನಿತಾ ಸಾಹಿತ್ಯ ವೇದಿಕೆ, ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಬಸವ ಜಯಂತಿ, ತಾಯಂದಿರ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಹಿರಿಯ ವನಿತೆಯರ ಆನಂದಧಾಮದಲ್ಲಿ ನಡೆಯಿತು.
ಉತ್ತಮ ಹಾಡುಗಾರರಾಗಲು ನಿತ್ಯ ಕಲಿಕೆ ಮುಖ್ಯ
ಗೀತಗಾಯನ ತರಬೇತಿ ಶಿಬಿರದಲ್ಲಿ ಕಲಿತ ಸಾಹಿತ್ಯ ಮತ್ತು ಸಂಗೀತಾಭ್ಯಾಸ ಒಂದೆರಡು ದಿನಕ್ಕೆ ಸೀಮಿತ ವಾಗದೆ, ನಿತ್ಯವೂ ಸಂಗೀತಾಭ್ಯಾಸ ಮಾಡುತ್ತಾ ಉತ್ತಮ ಹಾಡುಗಾರರಾಗಿ ಎಂದು ನಿವೃತ್ತ ಪ್ರಾಧ್ಯಾಪಕರಾದ ನೀಲಾಂಬಿಕೆ ಹೇಳಿದರು.
ಮಾದಾರ ಚೆನ್ನಯ್ಯ ಗುರು ಪೀಠಕ್ಕೆ ಬಾಲವಟುವಿನ ಸ್ವೀಕಾರ
ಚಿತ್ರದುರ್ಗ : ಇಲ್ಲಿನ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಬಸವ ಜಯಂತಿಯಂದು ಬಾಲಕನೋರ್ವನನ್ನು ವಟುವಾಗಿ ಸ್ವೀಕರಿಸಿ, ಧಾರ್ಮಿಕ ವಿಧಿ ವಿಧಾನದಿಂದ ದೀಕ್ಷೆ ನೀಡಿ `ಜಯ ಬಸವ' ಎಂದು ನಾಮಕರಣ ಮಾಡಿದ್ದಾರೆ.