ದಾವಣಗೆರೆ, ಮೇ 30- ನಗರದ ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಉದ್ಯೋಗ ಕೋಶದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮತ್ತು ಸಲಹೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಧಾರವಾಡದ ಗುರುದೇವ್ ಅಕಾಡೆಮಿ ಆಡಳಿತಾಧಿಕಾರಿ ಶಂಕರ್ ಆರ್. ಹಂಚಿ ಮತ್ತು ತರಬೇತುದಾರ ಶ್ರೀಕಾಂತ್ ಎಂ. ಆಗಮಿಸಿ ಪದವಿ ನಂತರ ವಿದ್ಯಾರ್ಥಿಗಳು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಮತ್ತು ಹೇಗೆ ತಯಾರಿಯನ್ನು ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕಾ ಜಿ.ಸಿ. ಉದ್ಯೋಗ ಕೋಶದ ಸಂಚಾಲಕರಾದ ಡಾ. ವಿಜಯ್ ಕುಮಾರ್, ಡಾ.ರಾಘವೇಂದ್ರ ಆರ್, ಡಾ.ಪ್ರವೀಣ್ ಕುಮಾರ್, ಪ್ರೊ. ರಾವ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.