ರಾತ್ರಿ 9ಕ್ಕೆ ನಿಶ್ಯಬ್ಧಗೊಂಡ ಹೊನ್ನಾಳಿ

ಹೊನ್ನಾಳಿ, ಏ. 22-   ಸಂತೆ ದಿನವಾದ ಹೊನ್ನಾಳಿಯಲ್ಲಿ ಬುಧವಾರ ಕೊರೊನಾ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ  ತಾಲ್ಲೂಕು ಆಡಳಿತವು ರಾತ್ರಿ 9 ಕ್ಕೆ ಬಸ್ ಸ್ಟ್ಯಾಂಡ್ ಸೇರಿದಂತೆ, ಪಟ್ಟಣದ ಎಲ್ಲಾ ರಸ್ತೆಗಳ ಅಂಗಡಿಗಳನ್ನು ಬಂದ್ ಮಾಡಿಸಿತು. ತಹಶೀಲ್ದಾರ್ ಬಸವನಗೌಡ ಕೊಟ್ಟೂರು ಮಾತನಾಡಿ, ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆ ಒಳಗೆ ವ್ಯಾಪಾರ, ವಹಿವಾಟು ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ನಾಲ್ಕು ತಾಸುಗಳು ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಸಾಧ್ಯವಾದರೆ ತರಕಾರಿ ವಹಿವಾಟನ್ನು ಪಟ್ಟಣದ ಎರಡು ಕಡೆ ವ್ಯವಸ್ಥೆ ಮಾಡಲಾಗುವುದೆಂದರು.

ಎಸ್‌ಐ ಬಸವಗೌಡ ಬಿರಾದಾರ್, ಪಂಚಾಯ್ತಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 9 ಗಂಟೆಯ ನಂತರ ಜನರ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

error: Content is protected !!