ಅಪೂರ್ಣ ಪ್ರಶ್ನೆ ಪತ್ರಿಕೆ ; ತಪ್ಪಿತಸ್ಥರ ವಿರುದ್ದ ಕ್ರಮ : ಕುಲಸಚಿವರ ಸ್ಪಷ್ಟನೆ

ದಾವಣಗೆರೆ,ಸೆ.12- ಕಳೆದ 11ರಂದು ಎಂ.ಕಾಂ. ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆಯಲ್ಲಿ ‘ಬಿಸಿನೆಸ್ ಅಪ್ಲಿಕೇಷನ್ ಅಂಡ್ ಆಪರೇಶನ್ ರಿಸರ್ಚ್’ ಪ್ರಶ್ನೆಪತ್ರಿಕೆಯಲ್ಲಿ ತಾಂತ್ರಿಕ ನೂನ್ಯತೆಗೆ ಸಂಬಂಧಿಸಿದಂತೆ  ತಪ್ಪಿತಸ್ಥರ ವಿರುದ್ಧ   ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾ ನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಯನ್ನು ನಿರ್ಲಕ್ಷ್ಯಿಸಲಾಗುವುದಿಲ್ಲ.   ವಿಚಾರಣೆ ನಡೆಸಿ, ವರದಿ ಪರಿಶೀಲಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ರೀತಿ ಆತಂಕಪಡಬಾರದು ಎಂದು ಅವರು ತಿಳಿಸಿದ್ದಾರೆ.

error: Content is protected !!