ದಾವಣಗೆರೆ, ಸೆ. 12 – ವಿದ್ಯಾನಗರದ ಶ್ರೀ ಮಟ್ಟಿ ಆಂಜನೇಯ ಸ್ವಾಮಿಗೆ ಭಾದ್ರಪದ ಮಾಸದಲ್ಲಿ ಎಡೆ ಪರವು ಕಾರ್ಯಕ್ರಮವು ನಾಡಿದ್ದು ದಿನಾಂಕ 14ರ ಶನಿವಾರ ಬೆಳಿಗ್ಗೆ 8.30 ರಿಂದ 12.30ರವರೆಗೆ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ರಿಂದ ಸ್ವಾಮಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಇದರ ಅಂಗವಾಗಿ ನಾಳೆ ದಿನಾಂಕ 13ರ ಶುಕ್ರವಾರ ರಾತ್ರಿ ಶಾಮನೂರಿನ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿಯ ಆಗಮನ ಹಾಗೂ ಶ್ರೀ ಆಂಜನೇ ಯಸ್ವಾಮಿ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ.
April 27, 2025