ದಾವಣಗೆರೆ, ಫೆ.20- ಕೈದಾಳೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ ಇದೇ ದಿನಾಂಕ 24ರಂದು ಬೆಳಿಗ್ಗೆ 7.45 ಗಂಟೆಗೆ ನೆರವೇರಲಿದ್ದು, ದಿನಾಂಕ 25ರಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯ ದಿಬ್ಬಣ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 3 ರಿಂದ ಜವಳ ಕಾರ್ಯಕ್ರಮವಿದ್ದು, 6.30ಕ್ಕೆ ಜೋಡಿ ಬಸವಗಳ ಹಾಗೂ ಗ್ರಾಮದ ಟ್ರ್ಯಾಕ್ಟರ್ಗಳ ಮೂಲಕ ಮೆರವಣಿಗೆಯೊಂದಿಗೆ ಪಾನಕ ವಿತರಣೆ ನಡೆಯಲಿದೆ. ಸಂಜೆ 9.30ಕ್ಕೆ ಅಗ್ನಿಕುಂಡ ಪೂಜೆ ಮತ್ತು ಓಕಳಿ ಹಾಗೂ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ವೀರಗಾಸೆ. ಮುಂಜಾನೆ 2.30ಕ್ಕೆ ಶ್ರೀ ಸ್ವಾಮಿಯ ನಡೆಮಡಿಯೊಂದಿಗೆ ಅಗ್ನಿಕುಂಡ ಪ್ರವೇಶ ಇರಲಿದೆ.
ನಾಳೆ ದಿನಾಂಕ 22ರ ಸಂಜೆ 6.30 ರಿಂದ ಮತ್ತು ಫೆ. 23 ರಂದು ಬೆಳಿಗ್ಗೆ 7.30 ರಿಂದ ಉತ್ತರಭಾದ್ರ ನಕ್ಷತ್ರದಲ್ಲಿ ಗೋದೂಳಿ ಉತ್ಸವದೊಂದಿಗೆ ಮತ್ತು ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ, ರಾತ್ರಿ 10.30ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ. ರಾತ್ರಿ 11 ರಿಂದ ಶ್ರೀ ಸ್ವಾಮಿಯ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ನಡೆಯಲಿದೆ.