ಹರಿಹರದಲ್ಲಿ ಶಕ್ತಿ ಪ್ರದರ್ಶಿಸಿದ ಜಿ.ಬಿ.ವಿನಯ್

ಹರಿಹರದಲ್ಲಿ ಶಕ್ತಿ ಪ್ರದರ್ಶಿಸಿದ ಜಿ.ಬಿ.ವಿನಯ್

ದಾವಣಗೆರೆ, ಮೇ 5 – ಹರಿಹರ ಪಟ್ಟಣದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ರೋಡ್ ಶೋ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ರಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಲಾಯಿತು. 

ಹರಿಹರ ಎಪಿಎಂಸಿ ಹರಿಹರೇಶ್ವರ ದೇವಸ್ಥಾನ ರಸ್ತೆ ಕೆ ಇ ಬಿ ರಸ್ತೆ ಮಾರ್ಗವಾಗಿ ಹರಪನಹಳ್ಳಿ ಸರ್ಕಲ್, ಎ. ಕೆ. ಕಾಲೋನಿ ರಸ್ತೆ, ಹರ್ಲಾಪುರ ರಸ್ತೆ, ಶಿವಮೊಗ್ಗ ರಸ್ತೆ ಮಾರ್ಗವಾಗಿ ಜೆ. ಸಿ. ಬಡಾವಣೆ ನಾಲ್ಕನೇ ಮೇನ್ ಆಸ್ಪತ್ರೆ ರಸ್ತೆ ಮಾರ್ಗವಾಗಿ ಪಿ. ಬಿ. ರಸ್ತೆಯವರೆಗೆ ರೋಡ್ ಶೋ ನಡೆಸಲಾಯಿತು.  

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ಹರಿಹರ ತಾಲ್ಲೂಕಿನಲ್ಲಿ ಎಷ್ಟೊಂದು ಬೆಂಬಲ ಸಿಕ್ಕಿದೆ ಎಂಬುದು ಗೊತ್ತಾಗುತ್ತದೆ. ಎಲ್ಲಾ ವರ್ಗದ ಜನರು ತುಂಬಾನೇ ಪ್ರೀತಿ ಕೊಟ್ಟಿದ್ದಾರೆ ಎಂದು ಹೇಳಿದರು.  

ಬಿಬಿಎಂಪಿ ಮಾಜಿ ಮೇಯರ್ ಕೆ. ವೆಂಕಟೇಶ್ ಮೂರ್ತಿ, ನಿವೃತ್ತ ಕೆಎಎಸ್ ಅಧಿಕಾರಿಗಳಾದ ಕೊತ್ತಬಂರಿ ಸಿದ್ಧಪ್ಪ ಭಾನುವಳ್ಳಿ,  ಕೆ. ರೇವಣಪ್ಪ ಕಮಲಪುರ, ಕುರುಬ ಸಮಾಜದ ರಾಜ್ಯ ಘಟಕದ ಮಾಜಿ ನಿರ್ದೇಶಕ ಟಿ. ಬಸವರಾಜ್, ನಾಗರಾಜ್ ಎಸ್. ಮೇರ್ವಾಡಿ, ಇಮ್ರಾನ್, ಕೆ. ಲಕ್ಷ್ಮಣ್, ಮುಬಾರಕ್, ನವಾಬ್, ಜಫಾರ್, ಸಾಹಿಲ್, ವಾಸೀಂ, ಇದಾಯತ್, ಅರ್ಫಾನ್, ಝೈಯದ್, ಕಾರ್ತಿಕ್, ಮಂಜುನಾಥ, ವಿನಯ್, ನದೀಮ್, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!