ಹರಪನಹಳ್ಳಿಯಲ್ಲಿ ಜನಸಾಗರ : ವಿನಯ್ ಕುಮಾರ್‌ಗೆ ಜೈಕಾರ

ಹರಪನಹಳ್ಳಿಯಲ್ಲಿ ಜನಸಾಗರ : ವಿನಯ್ ಕುಮಾರ್‌ಗೆ ಜೈಕಾರ

ಜಿಬಿವಿ ಜನುಮದಿನ ಆಚರಣೆ : ನೀಲಗುಂದ ಕ್ರಾಸ್ ಬಳಿ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಜಿ.ಬಿ. ವಿನಯ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ದಾರಿ ಮಧ್ಯೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. 

ದಾವಣಗೆರೆ, ಮೇ 5 – ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರು ಹರಪನಹಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಗ್ರಾಮ ಗ್ರಾಮ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರೂ ಜನವೋ ಜನರು ಕಂಡು ಬಂದರು. ಜನರ ಪ್ರೀತಿಗೆ ವಿನಯ್ ಕುಮಾರ್ ಅವರು ಖುಷಿಯಾದರು.

ಹರಪನಹಳ್ಳಿಗೆ ವಿನಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಸೇರಿದ್ದ ಜನಸ್ತೋಮ ಅದ್ಧೂರಿಯಾಗಿ ಸ್ವಾಗತ ನೀಡಿತಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿನಯ್ ಕುಮಾರ್ ಅವರಿಗೆ ಜೈಕಾರ, ಸಿಲಿಂಡರ್ ಘೋಷಣೆಗಳು ಮುಗಿಲು ಮುಟ್ಟಿದವು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರೆ, ಯುವಕರು ನೃತ್ಯ ಮಾಡಿ ಗಮನ ಸೆಳೆದರು.

ಹರಪನಹಳ್ಳಿಯ ಹರಿಹರ ವೃತ್ತದಿಂದ ಆರಂಭವಾದ ಬೃಹತ್ ರೋಡ್ ಶೋ ತೆಕ್ಕದಗರಡಿಕೇರೆ, ಅರಸಿಕೇರ ರಸ್ತೆ, ಕೋರಮರ ಓಣಿ, ವಾಲ್ಮೀಕಿ ನಗರ, ಐಬಿ ವೃತ್ತದಿಂದ ಕೊಟ್ಟೂರು ವೃತ್ತದ ಮುಖ್ಯರಸ್ತೆ, ಮೆಗಳಪೇಟೆ ಸಾಗಿದ ಮೂಲಕ ಸಾಗಿ ಹರಪ್ಪನಹಳ್ಳಿಯ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು. ಯಾವ ರಾಷ್ಟ್ರೀಯ ಪಕ್ಷಗಳಿಗೂ ಕಡಿಮೆ ಏನಿಲ್ಲ ಎಂಬಂತೆ ಮೆರವಣಿಗೆ ಸಾಗಿತು. ವಾದ್ಯಗಳು, ತಮಟೆ ಸದ್ದು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿತು. ಎಲ್ಲೆಲ್ಲೂ ವಿನಯ್ ಕುಮಾರ್ ಭಾವಚಿತ್ರ, ಸ್ವಾಭಿಮಾನಿ ಸಂಕೇತವೂ ರಾರಾಜಿಸಿತು.

ಈ ವೇಳೆ ಮಾತನಾಡಿದ ಅವರು, ಇಲ್ಲಿ ಸೇರಿ ರುವ ಜನಸ್ತೋಮ ನೋಡಿದರೆ ನನಗೆ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ಮತ್ತಷ್ಟು ಇಮ್ಮುಡಿಗೊಳಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಗ್ರಾಮ ಗ್ರಾಮಗಳಿಂದ ಬಂದಿರುವ ಜನರನ್ನು ನೋಡಿದರೆ ಬಿಜೆಪಿ, ಕಾಂಗ್ರೆಸ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಜನರ ಮಧ್ಯೆ ಇರುವವನು ನಾನು. ನಿಮ್ಮೊಂದಿಗೆ ಇರುವವನು ನಾನು. ನಿಮ್ಮಿಂದಲೇ ಬೆಳೆದವನು. ನಿಮಗಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ, ನೀವೇ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

error: Content is protected !!