ದಾವಣಗೆರೆ, ಏ. 28- ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರು ಜಿಲ್ಲಾ ಗ್ಯಾರೇಜ್, ವರ್ಕ್ ಶಾಪ್ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗ ಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಮತ ಯಾಚಿಸಿದರು.
ಫಾರೂಖ್, ನಾಗರಾಜ್, ಸೈಯ್ಯದ್ ಯೂಸುಫ್, ಸೈಯದ್ ತೌಫಿಕ್ ಮತ್ತಿತರರು ಇದ್ದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್, ಗ್ಯಾರೇಜ್, ವರ್ಕ್ ಶಾಪ್ ಕೆಲಸ ಮಾಡುವವರ ಪರಿಸ್ಥಿತಿ ಚೆನ್ನಾಗಿ ಅರಿತಿದ್ದೇನೆ. ನಿಮ್ಮ ಬದುಕು ಬದಲಾಯಿಸಲು ಶ್ರಮಿಸುತ್ತೇನೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿ ನನ್ನದು. ಒಂದು ಬಾರಿ ನನ್ನನ್ನು ಆರಿಸಿ ಕಳುಹಿಸಿ. ಆಮೇಲೆ ನಾನು ಮಾತನಾಡುವುದಿಲ್ಲ. ನನ್ನ ಕೆಲಸ ಮಾತನಾಡುವಂತೆ ಮಾಡಿ ಮತ್ತೆ ನಿಮ್ಮ ಬಳಿ ಬರುತ್ತೇನೆ ಎಂದು ಭರವಸೆ ನೀಡಿದರು.