ಕುಕ್ಕವಾಡ ಗ್ರಾಮದಲ್ಲಿ ರುದ್ರಭೂಮಿಯಲ್ಲಿ ಮಳೆಯ ನೀರು ಹರಿಯುತ್ತಿರುವ ಕಾರಣ ಶವ ಹೂಳಲು ಆಗುತ್ತಿಲ್ಲ.
ಹಿಂದುಳಿದ ವರ್ಗಗಳ ಉದ್ಧಾರಕ ಅರಸು : ಪ್ರೊ. ಹಲಸೆ
ಹಿಂದುಳಿದ, ದುರ್ಬಲ ವರ್ಗಗಳ ಜನರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರವಾದುದು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.
ಶಾಂತಿಸಾಗರದ ಸರ್ವೇಗೆ ಆಗ್ರಹ
ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂದು ಹೆಸರಾಗಿರುವ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದ ಸರ್ವೆ ಕಾರ್ಯ ಕೈಗೊಳ್ಳುವಂತೆ ಮೂರು ವರ್ಷಗಳಿಂದಲೂ ಆಗ್ರಹಿಸುತ್ತಾ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಆಸ್ಪತ್ರೆಯಲ್ಲಿ ಕೊರೊನಾ ರೋಗಿಯ ಆತ್ಮಹತ್ಯೆ
ಕೋವಿಡ್ ರೋಗಿಯೋರ್ವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿಂದು ಇಂದು ನಡೆದಿದೆ.
ಜಗಳವಾಡದ ಗಂಡ ಬೇಡೆಂದು ವಿಚ್ಛೇದನಕ್ಕೆ ಹೊರಟ ಪತ್ನಿ
ಸಂಭಲ್ : ಜಗಳವಾಡದ, ಸದಾ ಪ್ರೀತಿಸುವ, ತಪ್ಪು ಮಾಡಿದರೂ ಬೈಯ್ಯದ, ಮನೆ ಕೆಲಸದಲ್ಲಿ ನೆರವಾಗುವ ‘ಪರಿಪೂರ್ಣ’ ಗಂಡನಿಂದ ‘ಬೇಸತ್ತ’ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಗುಜರಾಯಿಸಿರುವ ಘಟನೆ ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಜಿಲ್ಲಾಧಿಕಾರಿಯಾಗಿ ವಿಜಯ ಮಹಾಂತೇಶ ದಾನಮ್ಮನವರ
ಹಾವೇರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ರಸ್ತೆ ಅಪಘಾತ : ಅಪರಿಚಿತನ ಸಾವು
ಆನಗೋಡು ಬಳಿ ಬಸವಶ್ರೀ ಭಾರತ್ ಪೆಟ್ರೋಲ್ ಬಂಕ್ ಎದುರುಗಡೆ ಎನ್.ಹೆಚ್. 4 ರಸ್ತೆ ದಾಟುತ್ತಿದ್ದ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಅಪಘಾತದಲ್ಲಿ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ರಂಭಾಪುರಿ ಜಗದ್ಗುರುಗಳ ಪ್ರವಾಸ
ಬಾಳೆಹೊನ್ನೂರು : ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿನ ಕಾರ್ಯಕ್ರಮಗಳ ವಿವರ.
ನಗರದಲ್ಲಿ ಇಂದು ಅಭಿನಂದನಾ ಸಮಾರಂಭ
ಡಿ.ಟಿ. ಶ್ರೀನಿವಾಸ್ ಅಭಿಮಾನಿ ಬಳಗದ ವತಿಯಿಂದ ನಾಡಿದ್ದು ದಿನಾಂಕ 6ರ ಶನಿವಾರ ಮಧ್ಯಾಹ್ನ 1.30ಕ್ಕೆ ನಗರದ ಬಿಐಇಟಿ ಆವರಣದ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಅರ್ಜಿ
ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರ ಮಕ್ಕಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವ್ಯಾಸಂಗಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೀಟು ಹಂಚಿಕೆಯ ಮೇರೆಗೆ, ಕೇಂದ್ರೀಯ ಸೈನಿಕ ಮಂಡಳಿಯಿಂದ ಡಿಫೆನ್ಸ್ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನಗರದಲ್ಲಿ ಇಂದು ಡಾ. ವಿಶ್ವನಾಥ್ ಅವರ ಪುಸ್ತಕ ಬಿಡುಗಡೆ
ಹೆಚ್.ಆಂಜನೇಯ ಅಭಿಮಾನಿಗಳು ಹಾಗೂ ಡಾ.ಹೆಚ್. ವಿಶ್ವನಾಥ್ ಅಭಿಮಾನಿಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವರೂ, ಚಿಂತಕರೂ ಆದ ಡಾ. ಹೆಚ್. ವಿಶ್ವನಾಥ್ ಅವರ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಇಂದು ಸಂಜೆ 6.30ಕ್ಕೆ ಆರ್.ಹೆಚ್. ಧರ್ಮಶಾಲೆಯಲ್ಲಿ ಏರ್ಪಡಿಸಲಾಗಿದೆ.
ನಗರದ ಶ್ರೀ ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು
ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಪದ್ಮಶಾಲಿ ಸಮಾಜದ ಹಿರಿಯರಾದ ಕ್ಯಾಪ್ಟನ್ ಪಿ.ಜೆ.ನಾಗರಾಜ್, ಡಿ.ಎಸ್.ಕೆ ಪರಶುರಾಮ ಅವರು ಶ್ರೀ ಮಾರ್ಕಂಡೇಶ್ವರ ಸ್ವಾಮಿಗೆ 101 ತೆಂಗಿನ ಕಾಯಿ ಒಡೆಯುವ ಹರಕೆಯನ್ನು ತೀರಿಸಲು ಇಂದು ಮಧ್ಯಾಹ್ನ 3 ಗಂಟೆಗೆ ಪೂಜೆ ಇರುತ್ತದೆ.
ಕಕ್ಕರಗೊಳ್ಳದಲ್ಲಿ ಇಂದು ಎನ್ನೆಸ್ಸೆಸ್ ಶಿಬಿರದ ಸಮಾರೋಪ
ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಬೆಳಗ್ಗೆ 11ಕ್ಕೆ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ನಗರಕ್ಕಿಂದು ಕರ್ನಾಟಕ ಜ್ಯೋತಿ ರಥಯಾತ್ರೆ
ಕರ್ನಾಟಕ ಸಂಭ್ರಮ - 50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥ ಯಾತ್ರೆಯು ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಇಂದು ಬೆಳಿಗ್ಗೆ 9ಕ್ಕೆ ಜಗಳೂರಿನಿಂದ ನಗರಕ್ಕೆ ಆಗಮಿಸಲಿದೆ.
11 ದಿನಗಳ ಪರ್ಯಂತರ ಪೂಜಾನುಷ್ಟಾನ
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಷಾಢ ಮಾಸದ ಅಂಗವಾಗಿ ಶ್ರೀಮಠದ ಶಿಲಾಮಂದಿರ ಜೀರ್ಣೋದ್ಧಾರ, ಲೋಕ ಕಲ್ಯಾಣಾರ್ಥ, ಮಳೆ, ಬೆಳೆ ಸಿದ್ಧಿಗಾಗಿ ಶ್ರೀ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ಸನ್ನಿಧಾನದಲ್ಲಿ ಇಂದಿನಿಂದ ಪೂಜಾನುಷ್ಟಾನ ಕೈಗೊಂಡಿದ್ದಾರೆ.
ಐರಣಿ ಹೊಳೆಮಠದಲ್ಲಿ ಇಂದಿನಿಂದ ಮುಪ್ಪಿನಾರ್ಯ ಶ್ರೀಗಳ ಪುಣ್ಯಾರಾಧನೆ
ರಾಣೇಬೆನ್ನೂರು : ತಾಲ್ಲೂಕಿನ ಐರಣಿ ಹೊಳೆಮಠದ ಶ್ರೀ ಸದ್ಗುರು ಮುಪ್ಪಿನಾರ್ಯ ಮಹಾತ್ಮಾಜಿಯವರ 40ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಇದೇ ದಿನಾಂಕ 8ರ ಸೋಮವಾರ ನಡೆಯಲಿದೆ. ಅಂದು ಬೆಳಿಗ್ಗೆ ಸಾಮೂಹಿಕ ವಿವಾಹ ಮತ್ತು ಮಧ್ಯಾಹ್ನ 3 ಗಂಟೆಗೆ ರಥೋತ್ಸವ ಜರುಗಲಿದೆ.
ಸಂತೇಬೆನ್ನೂರಿನಲ್ಲಿ ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ
ಜಿಲ್ಲಾದ್ಯಂತ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಯಿತು. ಹಳ್ಳಿಗಳಲ್ಲಿ ಮಾತ್ರ ಅಮವಾಸ್ಯೆ ಸಂಭ್ರಮ ಮನೆ ಮಾಡಿತ್ತು. ಉಳಿದಂತೆ ನಗರದ ಹಳೇ ಭಾಗದಲ್ಲಿ ಒಂದಿಷ್ಟು ಜನ ಈಗಲೂ ಆಚರಣೆ ರೂಢಿಸಿಕೊಂಡು ಬಂದಿದ್ದಾರೆ.
ರಸಗೊಬ್ಬರ ಮಿತ ಬಳಕೆಗೆ ಸೂಚನೆ
ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ರೈತರು ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ತಿಳಿಸಿದೆ. ಪ್ರತಿ ಎಕರೆಗೆ ಖುಷ್ಕಿ ಮುಸುಕಿನ ಜೋಳಕ್ಕೆ 25 ಕೆ.ಜಿ. ಯೂರಿಯಾ ಮಾತ್ರ ಬಳಸಬೇಕು.
ಮಕ್ಕಳು ದೊಡ್ಡ ಕನಸು ಕಾಣಬೇಕು, ಅಷ್ಟೇ ಶ್ರಮ ಪಡಬೇಕು
ಮಲೇಬೆನ್ನೂರು : ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿರುವ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ತರಬೇತಿಯನ್ನು ತುಮಕೂರಿನ ಟ್ಯಾಕಲ್ ಅಕಾಡೆಮಿಯ ಅಧ್ಯಕ್ಷ ಡಾ.ಹೆಚ್.ಎಸ್ ನಿರಂಜನಾರಾಧ್ಯ ಉದ್ಘಾಟಿಸಿದರು.
ನಿದ್ದೆಗೆ ಜಾರಿದ ಬಸ್ ಡ್ರೈವರ್: 7 ಜನರಿಗೆ ಗಾಯ
ಹೊನ್ನಾಳಿ : ಶಿವಮೊಗ್ಗದಿಂದ ಹೊನ್ನಾಳಿ ಮಾರ್ಗವಾಗಿ ದಾವಣಗೆರೆಗೆ ಹೋಗುತ್ತಿದ್ದ ಹರಿಹರ ಡಿಪೋಗೆ ಸಂಬಂಧಪಟ್ಟ ಕೆಎಸ್ಸಾರ್ಟಿಸಿ ಬಸ್ನ ಚಾಲಕ ನಿದ್ದೆ ಮಂಪರಿನಲ್ಲಿ ಹೊನ್ನಾಳಿಯ ಬಲ್ಭ್ ಫ್ಯಾಕ್ಟರಿಯ ಬಳಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುಂದಿನ 2 ಚಕ್ರಗಳು ಸಿಡಿದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ 27 ಪ್ರಯಾಣಿಕರಲ್ಲಿ, ಚಾಲಕ ತೆಲಗಿ ಸಿದ್ದಪ್ಪ ಸೇರಿದಂತೆ 7 ಜನರಿಗೆ ಸಣ್ಣ - ಪುಟ್ಟ ಗಾಯಗಳಾಗಿವೆ.
ಸಾಲದ ಶೂಲ : ಅನ್ನದಾತ ಆತ್ಮಹತ್ಯೆ
ಹೊನ್ನಾಳಿ : ತಾಲ್ಲೂಕಿನ ಹರಳಹಳ್ಳಿ ಗ್ರಾಮದ ರೈತ ಡಿ.ಕೆ. ಕಡೂರಪ್ಪ (48) ಸಾಲ ಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರಪ್ರಶಸ್ತಿ : ಅರ್ಜಿ ಆಹ್ವಾನ
ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ, ಸಂಸ್ಥೆಗಳಿಗೆ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ: 10 ವರ್ಷ ಕಾರಾಗೃಹ ಶಿಕ್ಷೆ, ಲಕ್ಷ ದಂಡ
ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಹರಿಹರ : ಜಿಟಿಟಿಸಿ ನೇರ ಪ್ರವೇಶಕ್ಕೆ ಆಹ್ವಾನ
ಹರಿಹರದ ಹರ್ಲಾಪುರದ ಕೆಎಸ್ಆರ್ಟಿಸಿ ಬಸ್ ಡಿಪೋ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ಡಿಪ್ಲೋಮಾ ಕೋರ್ಸುಗಳ ಉಳಿಕೆ ಸೀಟುಗಳ ನೇರ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾಭ್ಯಾಸ
ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ 10 ರಿಂದ 18ರ ವಯೋಮಾನದ ಒಳಗಿನ ಅಂಧ ಮಕ್ಕಳಿಗೆ ನಗರ ಸಮೀಪದ ಬಾಡಾ ಕ್ರಾಸ್ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯಿಂದ ಸಂಗೀತ ವಿದ್ಯಾಭ್ಯಾಸ ಕಲಿಯಲು ಅವಕಾಶವಿರುತ್ತದೆ
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಇಂದು ಮಣ್ಣೆತ್ತಿನ ಅಮಾವಾಸ್ಯೆ
ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.
`ಎಆರ್ಜಿ ವೈಭವ’ ದಲ್ಲಿ ಇಂದು ಸಾಂಸ್ಕೃತಿಕ ಪರಂಪರೆ
ಎಆರ್ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಸಾಂಸ್ಕೃತಿಕ ಪರಂಪರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗಂಗನರಸಿಯಲ್ಲಿ ಇಂದು ಮಣ್ಣೆತ್ತಿನ ಅಮಾವಾಸ್ಯೆ ವಿಶೇಷ ಪೂಜೆ
ಹರಿಹರ ತಾಲ್ಲೂಕಿನ ಗಂಗ ನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ಇಂದು ಬೆಳಿಗ್ಗೆ 11ಕ್ಕೆ ನಡೆಯಲಿವೆ.
![01 jgl kere 06.07.2024 ಅಂತೂ ಬಂತು ಜಗಳೂರು ಕೆರೆಗೆ ನೀರು](https://janathavani.com/wp-content/uploads/2024/07/01-jgl-kere-06.07.2024-580x440.jpg)
ಅಂತೂ ಬಂತು ಜಗಳೂರು ಕೆರೆಗೆ ನೀರು
ಜಗಳೂರು : ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಕೆರೆ ಮತ್ತು ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಭಾಗವಾಗಿ ಇಂದು ಜಗಳೂರು ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳಿಗೆ ತುಂಗಭದ್ರಾ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಲಾಯಿತು.
![05 HRR 06.07.2024 ಹರಿಹರದಲ್ಲಿ ಜ್ಯೋತಿ ರಥಯಾತ್ರೆಯ ಸಂಭ್ರಮ](https://janathavani.com/wp-content/uploads/2024/07/05-HRR-06.07.2024-580x440.jpg)
ಹರಿಹರದಲ್ಲಿ ಜ್ಯೋತಿ ರಥಯಾತ್ರೆಯ ಸಂಭ್ರಮ
ಹರಿಹರ : ನಗರಕ್ಕೆ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುವ ಜ್ಯೋತಿ ರಥಯಾತ್ರೆ ರಾಣೇಬೆನ್ನೂರು ತಾಲ್ಲೂಕಿನಿಂದ ಹರಿಹರ ತಾಲ್ಲೂಕಿಗೆ ಆಗಮಿಸಿದಾಗ, ತಹಶೀಲ್ದಾರ್ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಅರ್ಪಿಸಿ, ಹೂವಿನ ಹಾರವನ್ನು ಹಾಕುವುದರ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ, ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
![06 HRP 06.07.2024 ಹತ್ತಾರು ಸಮಸ್ಯೆಗಳನ್ನು ವಿರೋಧಿಸಿ ಪಂಜಿನ ಮೆರವಣಿಗೆ](https://janathavani.com/wp-content/uploads/2024/07/06-HRP-06.07.2024-580x440.jpg)
ಹತ್ತಾರು ಸಮಸ್ಯೆಗಳನ್ನು ವಿರೋಧಿಸಿ ಪಂಜಿನ ಮೆರವಣಿಗೆ
ಹರಪನಹಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ್ ಕಮ್ಯುನಿಸ್ಟ್ ಪಕ್ಷ, ರೈತ ಸಂಘ, ದಲಿತ ಸಂಘ, ಮಹಿಳಾ ಸಂಘ ಮತ್ತಿತರೆ ಸಂಘಟನೆಗಳು, ಏಳು ಗ್ರಾಮ ಪಂಚಾಯಿತಿಗಳ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಅರಸೀಕೆರೆಯ ಸಮುದಾಯ ಆರೋಗ್ಯ ಕೇಂದ್ರದಿಂದ ನಾಡ ಕಛೇರಿಯವರೆಗೆ ಪಂಜಿನ ಮೆರವಣಿಗೆ ಮಾಡಿದರು.
![20 bhadra 06.07.2024 ಭದ್ರಾ ಜಲಾಶಯದ ತಳಭಾಗದ ಗೇಟ್ನಿಂದ ವ್ಯರ್ಥವಾಗುತ್ತಿರುವ ನೀರು?](https://janathavani.com/wp-content/uploads/2024/07/20-bhadra-06.07.2024.jpg)
ಭದ್ರಾ ಜಲಾಶಯದ ತಳಭಾಗದ ಗೇಟ್ನಿಂದ ವ್ಯರ್ಥವಾಗುತ್ತಿರುವ ನೀರು?
ಮಲೇಬೆನ್ನೂರು : ಭದ್ರಾ ಜಲಾಶಯದ ತಳಭಾಗದಲ್ಲಿರುವ ಗೇಟ್ ಹಾಳಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಜಲಾಶಯ ತುಂಬುವುದನ್ನೇ ಕಾತುರದಿಂದ ಕಾಯುತ್ತಿರುವ ಅಚ್ಚುಕಟ್ಟಿನ ರೈತರಿಗೆ ನೀರು ಪೋಲಾಗುತ್ತಿರುವ ಸುದ್ದಿ ಆತಂಕ ತಂದಿದೆ.
![23 terige 06.07.2024 ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸುಧೀಂದ್ರರಾವ್ ಆಯ್ಕೆ](https://janathavani.com/wp-content/uploads/2024/07/23-terige-06.07.2024-580x299.jpg)
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸುಧೀಂದ್ರರಾವ್ ಆಯ್ಕೆ
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸಂಘದ ಮಾಜಿ ಅಧ್ಯಕ್ಷರೂ, ಹಿರಿಯ ತೆರಿಗೆ ಸಲಹೆಗಾರರೂ ಆದ ಹೆಚ್.ಟಿ. ಸುಧೀಂದ್ರರಾವ್ ಆಯ್ಕೆಯಾಗಿದ್ದಾರೆ.
![22 inner wheel 06.07.2024 ಇನ್ನರ್ವ್ಹೀಲ್ ಅಧ್ಯಕ್ಷರಾಗಿ ಪ್ರೇಮ](https://janathavani.com/wp-content/uploads/2024/07/22-inner-wheel-06.07.2024-580x359.jpg)
ಇನ್ನರ್ವ್ಹೀಲ್ ಅಧ್ಯಕ್ಷರಾಗಿ ಪ್ರೇಮ
ಸ್ಥಳೀಯ ವಿದ್ಯಾನಗರ ರೋಟರಿ ಸಂಸ್ಥೆ ಹಾಗೂ ಇನ್ನರ್ವ್ಹೀಲ್ ಸಂಸ್ಥೆಯ 2024-25ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ನಾಳೆ ದಿನಾಂಕ 6ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
![08 SAint Johns 06.07.2024 ಸೇಂಟ್ಜಾನ್ಸ್ ಶಾಲೆಯಲ್ಲಿ ಯೋಗ ದಿನಾಚರಣೆ](https://janathavani.com/wp-content/uploads/2024/07/08-SAint-Johns-06.07.2024-580x440.jpg)
ಸೇಂಟ್ಜಾನ್ಸ್ ಶಾಲೆಯಲ್ಲಿ ಯೋಗ ದಿನಾಚರಣೆ
ನಗರದ ಸೇಂಟ್ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ 10 ನೇ ವಿಶ್ವ ಯೋಗ ದಿನವನ್ನು ಉದ್ಘಾಟಿಸಲಾಯಿತು.
![09 jGL 06.07.2024 ಜಗಳೂರಿನಲ್ಲಿ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ](https://janathavani.com/wp-content/uploads/2024/07/09-jGL-06.07.2024-580x440.jpg)
ಜಗಳೂರಿನಲ್ಲಿ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
ಜಗಳೂರು : ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಗೆ ತಾಲ್ಲೂಕು ಆಡಳಿತದಿಂದ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
![12 rnr 06.07.2024 ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಗುರಿ ಮುಖ್ಯ](https://janathavani.com/wp-content/uploads/2024/07/12-rnr-06.07.2024-580x440.jpg)
ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಗುರಿ ಮುಖ್ಯ
ಓದುವ ಸಮಯದಲ್ಲಿ ತುಂಬಾ ಶ್ರದ್ದೆಯಿಂದ ಓದಿ ತಮ್ಮ ಗುರಿ ಮುಟ್ಟುವ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದು ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಇ. ಶಿವಕುಮಾರ್ ಹೊನ್ನಾಳಿ ಕಿವಿಮಾತು ಹೇಳಿದರು.
![25 shambu 06.07.2024 ಲಿ೦ಗಾಯತ ಮಹಾಸಭಾ ಚುನಾವಣೆ ಶಂಭು ಉರೇಕೊಂಡಿ ನಾಮಪತ್ರ ಸಲ್ಲಿಕೆ](https://janathavani.com/wp-content/uploads/2024/07/25-shambu-06.07.2024-580x440.jpg)
ಲಿ೦ಗಾಯತ ಮಹಾಸಭಾ ಚುನಾವಣೆ ಶಂಭು ಉರೇಕೊಂಡಿ ನಾಮಪತ್ರ ಸಲ್ಲಿಕೆ
ಅಖಿಲ ಭಾರತ ವೀರಶೈವ ಲಿ೦ಗಾಯತ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಶಂಭು ಎಸ್. ಉರೇಕೊಂಡಿ ಅವರು ಮಹಾಸಭಾದ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.
![19 vasathi 06.07.2024 ವಸತಿ ನಿಲಯಗಳಲ್ಲಿ ಪೌಷ್ಠಿಕ ಆಹಾರಕ್ಕೆ ಆದ್ಯತೆ ನೀಡಿ](https://janathavani.com/wp-content/uploads/2024/07/19-vasathi-06.07.2024-580x440.jpg)
ವಸತಿ ನಿಲಯಗಳಲ್ಲಿ ಪೌಷ್ಠಿಕ ಆಹಾರಕ್ಕೆ ಆದ್ಯತೆ ನೀಡಿ
ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಗೃಹ ಕಛೇರಿಯಲ್ಲಿ ಇಂದು ಸಭೆ ನಡೆಸಿದರು.
![01 hrp 05.07.2024 ಕನ್ನಡ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡುತ್ತಿರುವ ಕಸಾಪ](https://janathavani.com/wp-content/uploads/2024/07/01-hrp-05.07.2024-580x440.jpg)
ಕನ್ನಡ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡುತ್ತಿರುವ ಕಸಾಪ
ಹರಪನಹಳ್ಳಿ : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ ಎಂದು ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ.ಸಿದ್ದಲಿಂಗಮೂರ್ತಿ ಹೇಳಿದರು.
![02 prakasha 05.07.2024 ಹೀರೋ ಕಂಪನಿಯ ಎಲೆಕ್ಟ್ರಿಕಲ್ ವಾಹನ `ವಿಡಾ’ ಪ್ರಕಾಶಾ ಮೋಟಾರ್ಸ್ನಲ್ಲಿ ಬಿಡುಗಡೆ](https://janathavani.com/wp-content/uploads/2024/07/02-prakasha-05.07.2024-580x440.jpg)
ಹೀರೋ ಕಂಪನಿಯ ಎಲೆಕ್ಟ್ರಿಕಲ್ ವಾಹನ `ವಿಡಾ’ ಪ್ರಕಾಶಾ ಮೋಟಾರ್ಸ್ನಲ್ಲಿ ಬಿಡುಗಡೆ
ದ್ವಿಚಕ್ರ ವಾಹನ ತಯಾರಿಕೆ ಯಲ್ಲಿ ಹೆಸರಾಗಿರುವ ಹೀರೋ ಕಂಪನಿಯು ಇದೀಗ ಎಲೆಕ್ಟ್ರಿಕಲ್ ವಾಹನವನ್ನು ಪರಿಚಯಿಸಿದ್ದು, `ವಿಡಾ' ಹೆಸರಿನ ಈ ವಾಹನ ಮಾರುಕಟ್ಟೆಯಲ್ಲೀಗ ಬೇಡಿಕೆಯಲ್ಲಿದೆ.
![03 Sahakari 05.07.2024 ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಗತ್ಯ](https://janathavani.com/wp-content/uploads/2024/07/03-Sahakari-05.07.2024-580x440.jpg)
ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಗತ್ಯ
ಸಹಕಾರಿ ಕ್ಷೇತ್ರಕ್ಕೆ ಪ್ರಾಮಾಣಿಕತೆ, ಪರಿಶುದ್ಧತೆ ಇಂದಿನ ತುರ್ತು ಅಗತ್ಯವಾಗಿದೆ. ದೇಶದಲ್ಲಿ ಸಹಕಾರಿ ಚಳವಳಿ ಬೆಳೆಯುತ್ತಿದೆ. ಆದರೂ ಸಹಕಾರಿ ಕ್ಷೇತ್ರದಲ್ಲಿನ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಕೆ. ಮಹೇಶ್ವರಪ್ಪ ವಿಷಾದಿಸಿದರು.
![06 BHAVASARA 05.07.2024 ಹೆಚ್ಚುತ್ತಿರುವ ಬೆನ್ನು ನೋವಿಗೆ ಆಧುನಿಕ ಜೀವನ ಶೈಲಿ ಕಾರಣ](https://janathavani.com/wp-content/uploads/2024/07/06-BHAVASARA-05.07.2024-580x440.jpg)
ಹೆಚ್ಚುತ್ತಿರುವ ಬೆನ್ನು ನೋವಿಗೆ ಆಧುನಿಕ ಜೀವನ ಶೈಲಿ ಕಾರಣ
ಹೆಚ್ಚುತ್ತಿರುವ ಬೆನ್ನು ನೋವು ಸಮಸ್ಯೆಗೆ ಇಂದಿನ ಆಧುನಿಕ ಜೀವನ ಶೈಲಿಯ ಮಾರ್ಪಾಡುಗಳೇ ಕಾರಣ ಎಂದು ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.
![10 CRICKET 05.07.2024 ಟಿ20 ವಿಜೇತರಿಗೆ ಪ್ರಧಾನಿಯಿಂದ ಜನಸಾಮಾನ್ಯರವರೆಗೆ ಬಹುಪರಾಕ್](https://janathavani.com/wp-content/uploads/2024/07/10-CRICKET-05.07.2024-580x440.jpg)
ಟಿ20 ವಿಜೇತರಿಗೆ ಪ್ರಧಾನಿಯಿಂದ ಜನಸಾಮಾನ್ಯರವರೆಗೆ ಬಹುಪರಾಕ್
ಟಿ20 ವಿಶ್ವಕಪ್ ವಿಜೇತರಾಗಿ ಮರಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಜನಸಾಮಾನ್ಯರವರೆಗೆ ಭವ್ಯ ಸ್ವಾಗತ ಕೋರಿದ್ದಾರೆ.
![3 PARISARA 05.07.2024 ಪರಿಸರ ಬದಲಾವಣೆಯಿಂದ ಮನುಕುಲಕ್ಕೆ ಅಸ್ತಿತ್ವದ ಅಪಾಯ](https://janathavani.com/wp-content/uploads/2024/07/3-PARISARA-05.07.2024-580x440.jpg)
ಪರಿಸರ ಬದಲಾವಣೆಯಿಂದ ಮನುಕುಲಕ್ಕೆ ಅಸ್ತಿತ್ವದ ಅಪಾಯ
ಕಲಬುರಗಿಯಲ್ಲಿ ಕಂಡು ಬರುತ್ತಿದ್ದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಈಗ ದಾವಣಗೆರೆಯಲ್ಲಿ ಕಂಡು ಬರುತ್ತಿದೆ. ಪರಿಸರ ಬದಲಾವಣೆ ಹೀಗೆಯೇ ಮುಂದುವರೆದರೆ ಮನುಕುಲ ಭೂಮಿಯಲ್ಲಿ ಬದುಕಲು ಕಷ್ಟವಾಗುವ ವಾತಾವರಣ ಸೃಷ್ಟಿಯಾಗಲಿದೆ
![04 HRP MADAKA 04.07.2024 ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು](https://janathavani.com/wp-content/uploads/2024/07/04-HRP-MADAKA-04.07.2024--580x440.jpg)
ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು
ಹರಪನಹಳ್ಳಿ : ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗು. ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು ಎಂದು ದಾವಣಗೆರೆಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಹೇಳಿದರು.
![03 kanakuppi 04.07.2024 ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ](https://janathavani.com/wp-content/uploads/2024/07/03-kanakuppi-04.07.2024--580x440.jpg)
ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ
ಹರಿಹರ : ನಾವು ಮಾಡುವಂತಹ ಕಾಯಕದಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ, ತ್ಯಾಗ, ಸದಾಚಾರ, ಸದ್ಭಾವನಾ ಗುಣಗಳು ಇದ್ದಾಗ, ಭಗವಂತನು ನಮಗೆ ಆಶೀರ್ವಾದದ ರೂಪದಲ್ಲಿ ಬೇಡಿದ ಫಲಗಳನ್ನು ನೀಡುತ್ತಾನೆ ಎಂದು ಕಣಕುಪ್ಪಿ ಗವಿಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
![05 UKKADAGATHRI 04.07.2024 ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ](https://janathavani.com/wp-content/uploads/2024/07/05-UKKADAGATHRI-04.07.2024--580x440.jpg)
ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ (ಸ್ಮಶಾನ) ಮುಳ್ಳು ಗಿಡಗಳು ಬೆಳೆದು ಶವ ಸಂಸ್ಕಾರಕ್ಕೆ ಅಡ್ಡಿ ಉಂಟಾಗಿತ್ತು.
![08 CYLINDER 04.07.2024 ಸಿಲಿಂಡರ್ ಸ್ಫೋಟ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ](https://janathavani.com/wp-content/uploads/2024/07/08-CYLINDER-04.07.2024--580x440.jpg)
ಸಿಲಿಂಡರ್ ಸ್ಫೋಟ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ
ಇಲ್ಲಿನ ರಾಮನಗರದ ಎಸ್ಒಜಿ ಕಾಲೋನಿ ಮನೆಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![11 Computer 04.07.2024 ಪಠ್ಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಲು ಮನವಿ](https://janathavani.com/wp-content/uploads/2024/07/11-Computer-04.07.2024--580x440.jpg)
ಪಠ್ಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಲು ಮನವಿ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಕಾಡೆಮಿಕ್ ಸಮಿತಿಯು ಬಿ.ಕಾಂ ಪದವಿಯ ಪಠ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಬೇಕು ಎಂದು ವಿವಿಯ ಕುಲಪತಿಗಳಿಗೆ, ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರ ಘಟಕದ ಮಾಜಿ ರಾಜ್ಯಾಧ್ಯಕ್ಷ ಡಾ.ಆರ್.ಎಂ ಕುಬೇರಪ್ಪ ಒತ್ತಾಯಿಸಿದ್ದಾರೆ.
![12 CA Blood 04.07.2024 ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ರಕ್ತದಾನ ಶಿಬಿರ](https://janathavani.com/wp-content/uploads/2024/07/12-CA-Blood-04.07.2024--580x440.jpg)
ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ರಕ್ತದಾನ ಶಿಬಿರ
ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಪ್ರಯುಕ್ತ ಚಾರ್ಟರ್ಡ್ ಅಕೌಂಟೆಂಟ್ಸ್ ಭವದಲ್ಲಿ ರಕ್ತದಾನ ಶಿಬಿರ ನಡೆಯಿತು.
![14 Vaidya dina 04.07.2024 ರೋಟರಿ, ಇನ್ನರ್ವ್ಹೀಲ್ ಸಂಸ್ಥೆಯಿಂದ ವೈದ್ಯರ ದಿನಾಚರಣೆ, ವೈದ್ಯಕೀಯ ಶಿಬಿರ](https://janathavani.com/wp-content/uploads/2024/07/14-Vaidya-dina-04.07.2024--580x440.jpg)
ರೋಟರಿ, ಇನ್ನರ್ವ್ಹೀಲ್ ಸಂಸ್ಥೆಯಿಂದ ವೈದ್ಯರ ದಿನಾಚರಣೆ, ವೈದ್ಯಕೀಯ ಶಿಬಿರ
ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ವೈದ್ಯರ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
![13 Belalagere 04.07.2024 ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ](https://janathavani.com/wp-content/uploads/2024/07/13-Belalagere-04.07.2024--580x440.jpg)
ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ
ಮಲೇಬೆನ್ನೂರು : ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗ ಳೂರಿನ ಕೆಡಿಪಿ ಫೌಂಡೇಶನ್ ವತಿಯಿಂದ ಸಂಸ್ಥೆಯ ತಿಪ್ಪೇಶ್, ಶಶಿಕುಮಾರ್, ರಮೇಶ್ ಅವರುಗಳು ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡಿದರು.
![15 HNL 04.07.2024 ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ](https://janathavani.com/wp-content/uploads/2024/07/15-HNL-04.07.2024--580x440.jpg)
ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ
ಹೊನ್ನಾಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಬಣದಿಂದ ಲೋಕಸಭಾ ಚುನಾವಣಾ ಸೋಲಿನ ಆತ್ಮಾವಲೋಕನದ ಬಗ್ಗೆ ಸಭೆ ನಡೆಯಿತು.
![16 SIHI HANI 04.07.2024 ಕೇಳುಗರ ಮನಗೆದ್ದ `ಸಿನಿ ಹನಿ’ ಗಾನ](https://janathavani.com/wp-content/uploads/2024/07/16-SIHI-HANI-04.07.2024--580x440.jpg)
ಕೇಳುಗರ ಮನಗೆದ್ದ `ಸಿನಿ ಹನಿ’ ಗಾನ
ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ವರತಂತ್ರ ಗಾಯಕರ ತಂಡದ ವತಿಯಿಂದ `ನೂರೊಂದು ನೆನಪು ಹಾಡಾಗಿ ಬಂತು.......' ಶೀರ್ಷಿಕೆಯಡಿ ಏರ್ಪಡಿಸಿದ್ದ `ಸಿನಿಹನಿ' ಕಾರ್ಯಕ್ರಮ ಕೇಳುಗರ ಮನಗೆದ್ದಿತು.