ಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ನೀಡಿದರು.
ಹರಿಹರದಲ್ಲಿ ಇಂದಿನಿಂದ ಮಧ್ಯಾಹ್ನ 2ರ ನಂತರ ಲಾಕ್ಡೌನ್
ಹರಿಹರದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿನ ವಹಿವಾಟನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ನಡೆಸಿ, ನಂತರ ಸಂಪೂರ್ಣ ಲಾಕ್ಡೌನ್ ಮಾಡಲು ತೀರ್ಮಾನಕ್ಕೆ ಬರಲಾಯಿತು.
ಕೊರೊನಾ ವಾರಿಯರ್ಗಳಿಗೆ ಟೆಸ್ಟ್
ರಾಜ್ಯ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆ ಯರು, ಪೊಲೀಸರೂ ಸೇರಿದಂತೆ ಕೊರೊನಾ ವಾರಿಯರ್ಗಳ ಕೊರೊನಾ ಟೆಸ್ಟ್ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಂದೇ ದಿನದ 1,075 ಜನರನ್ನು ಟೆಸ್ಟ್ಗೆ ಒಳಪಡಿಸಲಾಗಿದೆ
ಲಾಕ್ಡೌನ್ ನಡುವೆ ವಿಕಲಚೇತನರ ‘ಮೂಕ’ ರೋಧನೆ
ಕೊರೊನಾ ಸಂಕಷ್ಟಕ್ಕೆ ಮುಂಚೆಯೇ ವಿಕಲಚೇತನರು ಸಮಾಜದಲ್ಲಿ ಅಸಮಾನತೆ ಎದುರಿಸುತ್ತಿದ್ದರು. ಲಾಕ್ಡೌನ್ ಹೇರಿಕೆಯ ನಂತರವಂತೂ ಅವರ ಪರಿಸ್ಥಿತಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ.
ಸುಳ್ ಸುಳ್ಳೇ ಪಾಸಿಟಿವ್
ಆವರಗೊಳ್ಳ ಹಾಗೂ ದೊಡ್ಡಬಾತಿಯ ನಾಲ್ವರು ಗರ್ಭಿಣಿಯರು ಸೇರಿದಂತೆ ಆರು ಜನರಿಗೆ ಯಾವುದೇ ಕೊರೊನಾ ಸೋಂಕಿಲ್ಲದಿದ್ದರೂ, ಪರೀಕ್ಷೆಯಲ್ಲಿ ಆದ ಲೋಪದಿಂದಾಗಿ ಹುಸಿ ಪಾಸಿಟಿವ್ ಬಂದಿದೆ.
ಐದೇ ದಿನದಲ್ಲಿ ಮುಗಿದ ಅಡಿಕೆ ವಿಮೆ ಕಂತು ಗಡುವು
ಜಿಲ್ಲೆಯಲ್ಲಿ 2024-25ರ ಸಾಲಿಗೆ ಅಡಿಕೆ ಬೆಳೆಗೆ ಸರ್ಕಾರದಿಂದ ವಿಮೆ ಪಡೆಯಲು ಕೇವಲ ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಜೂನ್ 27ರಿಂದ ವಿಮೆ ಕಂತು ಪಾವತಿಸಲು ಅವಕಾಶ ನೀಡಿದ್ದರೆ, ಜುಲೈ 1ರಂದೇ ಅವಧಿ ಮುಕ್ತಾಯಗೊಂಡಿದೆ.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಈಗ ಉಪ ನೋಂದಣಾಧಿಕಾರಿ
ಜನನ, ಮರಣ ನೋಂದಣಿಗೆ ಸರ್ಕಾರದ ಆದೇಶ ದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಜನನ, ಮರಣ ಉಪ ನೋಂದ ಣಾಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿದ್ದು, ಇಂದಿನಿಂದ ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣಗಳ ನೋಂದಣಿಯನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಲಾಗುತ್ತಿದೆ.
ಇಂದಿರಾ ಕ್ಯಾಂಟಿನ್ : ಅಭಿಪ್ರಾಯ ಸಂಗ್ರಹಿಸಿದ ಎಸಿ
ಮಲೇಬೆನ್ನೂರು : ಪಟ್ಟಣದ ಜಿಬಿಎಂ ಶಾಲೆಯ ಆವರಣದಲ್ಲಿ ಶಾಲಾ ಕೊಠಡಿಗಳನ್ನು ಒಡೆದು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವ ಸ್ಥಳಕ್ಕೆ ಸೋಮವಾರ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಗರದಲ್ಲಿ ಇಂದು ಫ.ಗು. ಹಳಕಟ್ಟಿ ಜನ್ಮದಿನ
ಜಿಲ್ಲಾಡಳಿತದ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಡಾ.ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.
ನಗರದಲ್ಲಿ ಇಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಗುರು ಬಸವ ಮಂಟಪದಲ್ಲಿ ಡಾ.ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ 2024-29 ನೇ ಸಾಲಿಗೆ ಚುನಾವಣೆ ನಡೆಯಲಿದ್ದು, ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯ ನೌಕರರ ವಿವರ ಪಡೆದುಕೊಂಡು ಕರಡು ಮತದಾರರ ಪಟ್ಟಿ ತಯಾರಿಸಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಬಾಕಿ ದಂಡ ಪಾವತಿಸಲು ಪೊಲೀಸ್ ಇಲಾಖೆ ಸೂಚನೆ
ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರು ಜುಲೈ 15ರೊಳಗೆ ದಂಡ ಪಾವತಿಸುವಂತೆ ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದ್ದಾರೆ.
ಮೋಟಾರ್ ರಿವೈಂಡಿಂಗ್ ತರಬೇತಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯಿಂದ ಇದೇ ದಿನಾಂಕ 10 ರಿಂದ 30 ದಿನಗಳ ಮೋಟಾರ್ ರಿವೈಂಡಿಂಗ್ ಉಚಿತ ತರಬೇತಿ ಆಯೋಜಿಸಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬ ಹುದಾಗಿದೆ.
ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಕ್ಷತ್ರಿಯ ಮರಾಠ ವಿದ್ಯಾ ಮತ್ತು ಕಲ್ಯಾಣಾಭಿವೃದ್ಧಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 75 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವ ಕ್ಷತ್ರಿಯ ಮರಾಠ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು
ಕಡ್ಲೇಬಾಳ್ನಲ್ಲಿ ಇಂದು
ದಾವಣಗೆರೆ ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ಶ್ರೀ ಸದ್ಗುರು ಕೃಪಾ ಭವನ (ದೇವರಹಟ್ಟಿ)ದಲ್ಲಿ `ಸದ್ಗುರುತ್ರಯರ ಮೂರ್ತಿ ಪ್ರತಿಷ್ಠಾಪನೆ' ಹಾಗೂ `ಶ್ರೀ ಮಹಾ ರಾಜರ ದಿವ್ಯ ಸ್ಥಿರ ಪಾದುಕೆಗಳ ಪ್ರತಿಷ್ಠಾಪನಾ' ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ 6ರಿಂದ ಭಜನೆ ಕಾರ್ಯಕ್ರಮ, 7 ನಡೆಯಲಿದೆ.
ಹಾಲಿನ ದರ ಹೆಚ್ಚಳ ವಿರೋಧಿಸಿ ನಗರದಲ್ಲಿ ಇಂದು ಬಿಜೆಪಿ ಪ್ರತಿಭಟನೆ
ಹಾಲಿನ ದರ ಹೆಚ್ಚಳ ವಿರೋಧಿಸಿ ನಾಳೆ ದಿನಾಂಕ 1 ರ ಸೋಮವಾರ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಹಾಗೂ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೆಂಕಟೇಶ್ ಬಾಬುಗೆ ಪಿಎಚ್ಡಿ ಪದವಿ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ವೆಂಕಟೇಶ್ ಬಾಬು ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದೆ.
ಜೋಸ್ ಅವರಿಗೆ ಕರಾಟೆ ಮಾಸ್ಟರ್ ಪ್ರಶಸ್ತಿ
ರಾಜ್ಯ ಕರಾಟೆ ತೀರ್ಪುಗಾರರ ಆಯೋಗದ ಅಧ್ಯಕ್ಷ ಕೆ.ಪಿ. ಜೋಸ್ ಅವರು ದೇಶದ ಅತ್ಯುತ್ತಮ ಕರಾಟೆ ಮಾಸ್ಟರ್ ಪ್ರಶಸ್ತಿಯನ್ನು ಕೇರಳದಲ್ಲಿ ಪಡೆದಿದ್ದಾರೆ. ಇವರು ಕರಾಟೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ `ಇಂಟರ್ನ್ಯಾಷನಲ್ ಫೌಂಡೇಶನ್ ಆಫ್ ಎಂಪವರ್ ಮೆಂಟ್ ಸಂಸ್ಥೆಯು ಈ ಪ್ರಶಸ್ತಿ ನೀಡಿದೆ.
ಸಾಣೇಹಳ್ಳಿ : ಪುಸ್ತಕ ಬಿಡುಗಡೆ
ಶಿವನಕೆರೆ ಬಸವಲಿಂಗಪ್ಪ ಅವರ `ವಚನ ಧರ್ಮದಲ್ಲಿ ನಡೆ-ನುಡಿ ಸಿದ್ಧಾಂತ' ಎಂಬ ಪುಸಕ ಬಿಡುಗಡೆ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ನೆರವೇರಲಿದೆ.
ಹೊನ್ನಾಳಿ : ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ
ಹೊನ್ನಾಳಿ : ತಾಲ್ಲೂಕಿನ ಅರಕೆರೆ ಎ.ಕೆ.ಕಾಲೋನಿಯ ಹತ್ತಿರದ ಕಾಡಿನಂತಿರುವ ಪ್ರದೇಶದಲ್ಲಿ ಇಂದು ಸಂಜೆ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದಲ್ಲಿ ಇಂದು ರಾಜ್ಯಮಟ್ಟದ ತಾಂತ್ರಿಕ ಮೇಳ
ಸುಕಲ್ಪ ಎನ್ನುವ ಎರಡು ದಿನಗಳ ರಾಜ್ಯ ಮಟ್ಟದ ತಾಂತ್ರಿಕ ಮೇಳವನ್ನು ನಗರದ ಜಿಎಂ ಯೂನಿವರ್ಸಿಟಿಯ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಆಯೋಜಿಸಲಾಗಿದೆ ಎಂದು ಐಎಸ್ಇ ಮುಖ್ಯಸ್ಥ ಹಾಗೂ ಸುಕಲ್ಪದ ಸಂಚಾಲಕ ಡಾ.ಟಿ.ಎಂ. ವೀರಗಂಗಾಧರ ಸ್ವಾಮಿ ತಿಳಿಸಿದರು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಇಂದು ನಗರದಲ್ಲಿ ಸತ್ಯಾಗ್ರಹ
ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜುಲೈ 1ರ ಸೋಮವಾರ ಬೆಳಗ್ಗೆ 11.30ರಿಂದ ಸಂಜೆ 5ರವರೆಗೆ ಮಹಾನಗರ ಪಾಲಿಕೆ ಕಚೇರಿ ಬಳಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು
ಸಾಲಕಟ್ಟೆಯಲ್ಲಿ ಇಂದು ಶಾಲಾ ಕೊಠಡಿ ಉದ್ಘಾಟನೆ
ಮಲೇಬೆನ್ನೂರು ಸಮೀಪದ ಸಾಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ ಶಾಲಾ ಕೊಠಡಿಯನ್ನು ಇಂದು ಬೆಳಿಗ್ಗೆ 10.30ಕ್ಕೆ ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಲಿದ್ದಾರೆ.
ಕಕ್ಕರಗೊಳ್ಳದಲ್ಲಿ ಇಂದು ಎನ್ನೆಸ್ಸೆಸ್ ಶಿಬಿರ
ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಎನ್ಎಸ್ಎಸ್ ಶಿಬಿರದ ಕಾರ್ಯಕ್ರಮಗಳು ನಡೆಯಲಿದೆ.
ನಗರದಲ್ಲಿ ಇಂದು ಆರೋಗ್ಯ ತಪಾಸಣೆ
ವಿಶ್ವಾಸ್ ಲೈಫ್ ಕೇರ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಹೊನ್ನಾಳಿ : 2 ಕ್ವಿಂಟಾಲ್ ಅಡಿಕೆ ಕಳವು
ಹೊನ್ನಾಳಿ : ತಾಲ್ಲೂಕಿನ ಲಿಂಗಾಪುರ ಗ್ರಾಮದ ಹನುಮಂತಪ್ಪ ಎನ್ನುವವರ ಕಣದಲ್ಲಿದ್ದ 2 ಕ್ವಿಂಟಾಲ್ ಅಡಿಕೆ ಕಳವು ನಡೆದಿರುವ ಘಟನೆಯ ಕುರಿತು ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಸಮುದಾಯ ಕೃಷಿ ಹೊಂಡ, ಕೃಷಿ ಹೊಂಡ, ಪ್ಯಾಕ್ಹೌಸ್, ಟ್ರ್ಯಾಕ್ಟರ್ 20 ಪಿಟಿಒ ಎಚ್ಪಿ ಒಳಗಿನ ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು ಎಸ್.ಎಂ.ಎ.ಎಂ. ಯೋಜನೆಯಡಿಯಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೆ ಫೈಬರ್ ದೋಟಿ (ಅಡಿಕೆ ಕಟಾವು ಮಾಡಲು) ಪಡೆಯಲು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಸಮಾಜ ಪ್ರೌಢಶಾಲೆ ಪ್ರಥಮ
ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಯಲ್ಲಿ ಮಹಿಳಾ ಸೇವಾ ಸಮಾಜದ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ದಿವ್ಯ ಮತ್ತು ಎಸ್. ಪ್ರಾರ್ಥನಾ ಪ್ರಥಮ ಸ್ಥಾನ ಪಡೆದಿದ್ದಾರೆ.
ನಗರಕ್ಕೆ ನಾಡಿದ್ದು ಮೂಳೆ ವೈದ್ಯರ ಭೇಟಿ
ರಾಮನಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆಯ ವೈದ್ಯ ಮಹದೇವಯ್ಯ ಅವರು ನಾಡಿದ್ದು ದಿನಾಂಕ 3ರಂದು ನಗರಕ್ಕೆ ಆಗಮಿಸಲಿದ್ದು, ನಿಟುವಳ್ಳಿಯಲ್ಲಿರುವ ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಿದ್ದಾರೆ
![04 HRR SBI 02.07.2024 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2ನೇ ಶಾಖೆ ಆರಂಭಿಸಲು ಆಗ್ರಹ](https://janathavani.com/wp-content/uploads/2024/07/04-HRR-SBI-02.07.2024-580x440.jpg)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2ನೇ ಶಾಖೆ ಆರಂಭಿಸಲು ಆಗ್ರಹ
ಹರಿಹರ : ನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 2ನೇ ಶಾಖೆ ಆರಂಭಿಸಲು ಆಗ್ರಹಿಸಿ, ಬ್ಯಾಂಕ್ ಗ್ರಾಹಕರ ಹಿತ ರಕ್ಷಣಾ ಸಮಿತಿಯಿಂದ ಶುಕ್ರವಾರ ತಹಶೀಲ್ದಾರ್ ಗುರುಬಸವರಾಜ್ ಇವರಿಗೆ ಮನವಿ ನೀಡಲಾಯಿತು.
![03 DC 02.07.2024 ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೆ ಎರಡು ಇಲಾಖೆಗೂ ಅನುಕೂಲ: ಜಿಲ್ಲಾಧಿಕಾರಿ ವೆಂಕಟೇಶ್](https://janathavani.com/wp-content/uploads/2024/07/03-DC-02.07.2024-580x440.jpg)
ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೆ ಎರಡು ಇಲಾಖೆಗೂ ಅನುಕೂಲ: ಜಿಲ್ಲಾಧಿಕಾರಿ ವೆಂಕಟೇಶ್
ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಎರಡೂ ಇಲಾಖೆಗೂ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
![05 MBR 02.07.2024 ಮಲೇಬೆನ್ನೂರು ಪುರಸಭೆಗೆ ಐವರು ನಾಮ ನಿರ್ದೇಶನ](https://janathavani.com/wp-content/uploads/2024/07/05-MBR-02.07.2024-580x440.jpg)
ಮಲೇಬೆನ್ನೂರು ಪುರಸಭೆಗೆ ಐವರು ನಾಮ ನಿರ್ದೇಶನ
ಮಲೇಬೆನ್ನೂರು : ಪಟ್ಟಣದ ಪುರಸಭೆಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಿ. ವೀರಯ್ಯ, ಎ. ಆರಿಫ್ ಅಲಿ, ಬುಡ್ಡವರ್ ರಫೀಕ್ ಸಾಬ್, ಎಕ್ಕೆಗೊಂದಿ ಕರಿಯಪ್ಪ ಮತ್ತು ದೊಡ್ಡಮನಿ ಬಸವರಾಜ್ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
![06 HOSTEL 02.07.2024 ಹಾಸ್ಟೆಲ್ ಸೌಲಭ್ಯ : ಎಐಎಸ್ಎಫ್ ಪ್ರತಿಭಟನೆ](https://janathavani.com/wp-content/uploads/2024/07/06-HOSTEL-02.07.2024-580x440.jpg)
ಹಾಸ್ಟೆಲ್ ಸೌಲಭ್ಯ : ಎಐಎಸ್ಎಫ್ ಪ್ರತಿಭಟನೆ
ಹರಪನಹಳ್ಳಿ : ತಾಲ್ಲೂಕಿನ ಎಸ್ಸಿ ಎಸ್ಟಿ ಹಾಗೂ ಬಿಸಿಎಂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ, ನೀಟ್ ಪರೀಕ್ಷಾ ಅಕ್ರಮ ಖಂಡಿಸಿ, ಎ.ಐ.ಎಸ್.ಎಫ್ ತಾಲ್ಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
![07 karave 02.07.2024 ಉದ್ಯೋಗ ಮೀಸಲಾತಿಗಾಗಿ ಕರವೇ ಆಗ್ರಹ](https://janathavani.com/wp-content/uploads/2024/07/07-karave-02.07.2024-580x440.jpg)
ಉದ್ಯೋಗ ಮೀಸಲಾತಿಗಾಗಿ ಕರವೇ ಆಗ್ರಹ
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಕಾನೂನು ರೂಪಿಸಬೇಕು. ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
![08 kondajji 02.07.2024 ಕೊಂಡಜ್ಜಿ ಬಸಪ್ಪ ಶಾಲೆಯಲ್ಲಿ ಯೋಗ ದಿನ](https://janathavani.com/wp-content/uploads/2024/07/08-kondajji-02.07.2024-580x440.jpg)
ಕೊಂಡಜ್ಜಿ ಬಸಪ್ಪ ಶಾಲೆಯಲ್ಲಿ ಯೋಗ ದಿನ
ಎಲೆಬೇತೂರು : ಇಲ್ಲಿನ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ದಾವಣಗೆರೆಯ ಪಂತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು.
![09 samaja seve 02.07.2024 ಸಮಾಜ ಸೇವೆಗೆ, ದಾನಿಗಳ ಸಹಕಾರ ಮುಖ್ಯ](https://janathavani.com/wp-content/uploads/2024/07/09-samaja-seve-02.07.2024-580x440.jpg)
ಸಮಾಜ ಸೇವೆಗೆ, ದಾನಿಗಳ ಸಹಕಾರ ಮುಖ್ಯ
ಸಮಾಜ ಸೇವೆಗೆ ದಾನಿಗಳ ಸಹಕಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕೆಂದು ಉದ್ಯಮಿ ಪ್ರಭಾಕರ್ ಶೆಟ್ಟಿ ಹೇಳಿದರು.
![11 HRR news 02.07.2024 ಹರಿಹರದ ನೀರು ಶೇಖರಣಾ ಘಟಕದ ಸ್ಥಾಪನೆ ವಿಚಾರ : ಡಿಸಿ ಭೇಟಿ, ಪರಿಶೀಲನೆ](https://janathavani.com/wp-content/uploads/2024/07/11-HRR-news-02.07.2024-580x380.jpg)
ಹರಿಹರದ ನೀರು ಶೇಖರಣಾ ಘಟಕದ ಸ್ಥಾಪನೆ ವಿಚಾರ : ಡಿಸಿ ಭೇಟಿ, ಪರಿಶೀಲನೆ
ಹರಿಹರ : ನಗರದ ಜನತೆಯ ಬಹುದಿನಗಳ ಬೇಡಿಕೆಯಾದ ನೀರು ಶೇಖರಣಾ ಘಟಕದ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರು ನಗರದ ಹಳೇ ದಾವಣಗೆರೆ ವಾಟರ್ ವರ್ಕ್ಸ್ ಬಳಿ ಇರುವ ಖಾಲಿ ಜಾಗಕ್ಕೆ ಭೇಟಿಕೊಟ್ಟು, ಸ್ಥಳ ಮತ್ತು ಕಡತಗಳನ್ನು ಪರಿಶೀಲನೆ ನಡೆಸಿದರು.
![12 go green 02.07.2024 ಗೋ ಗ್ರೀನ್ ವನ ಮಹೋತ್ಸವ : ಬಂಟರ ಮಹಿಳಾ ಘಟಕದಿಂದ ವನ ಮಹೋತ್ಸವ](https://janathavani.com/wp-content/uploads/2024/07/12-go-green-02.07.2024-580x440.jpg)
ಗೋ ಗ್ರೀನ್ ವನ ಮಹೋತ್ಸವ : ಬಂಟರ ಮಹಿಳಾ ಘಟಕದಿಂದ ವನ ಮಹೋತ್ಸವ
ದಾವಣಗೆರೆ-ಚಿತ್ರದುರ್ಗ ಬಂಟರ ಮಹಿಳಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
![13 shikshana 02.07.2024 ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ](https://janathavani.com/wp-content/uploads/2024/07/13-shikshana-02.07.2024-580x440.jpg)
ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ
ಮಕ್ಕಳು ಉತ್ತಮ ಸಂಸ್ಕಾರದ ಜತೆಗೆ ಉಜ್ವಲ ಭವಿಷ್ಯ ಹೊಂದಲು ಹಾಗೂ ದೇಶವು ಅಭಿವೃದ್ಧಿಯಾಗಲು ಶಿಕ್ಷಣದಿಂದಲೇ ಸಾಧ್ಯ ಎಂದು ವಿರಕ್ತಮಠದ ಬಸವಪ್ರಭು ಶ್ರೀಗಳು ಹೇಳಿದರು.
![14 vachana 02.07.2024 ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು : ಮಹಾಂತೇಶ ನಿಟ್ಟೂರು](https://janathavani.com/wp-content/uploads/2024/07/14-vachana-02.07.2024-580x440.jpg)
ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು : ಮಹಾಂತೇಶ ನಿಟ್ಟೂರು
ಸಂತೇಬೆನ್ನೂರು : ಮೌಢ್ಯ, ಆಡಂಬರ, ಡಾಂಭಿಕತೆಯ ಜೀವನದ ಸಂಕೋಲೆಯ ಸುಳಿಯಲ್ಲಿ ಸಿಲುಕಿ ನೊಂದ ಜೀವಗಳಿಗೆ ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು. ವಚನಗಳನ್ನು ಓದಿ ಅಳವಡಿಸಿಕೊಂಡರೆ ಬದುಕು ಸುಂದರ ಎಂದು ಉಪನ್ಯಾಸಕ ಮಹಾಂತೇಶ ಬಿ. ನಿಟ್ಟೂರು ಅಭಿಪ್ರಾಯಪಟ್ಟರು.
![16 Milk rate 02.07.2024 ಹಾಲಿನ ದರ ಏರಿಕೆ: ಬಿಜೆಪಿ ಪ್ರತಿಭಟನೆ](https://janathavani.com/wp-content/uploads/2024/07/16-Milk-rate-02.07.2024-580x440.jpg)
ಹಾಲಿನ ದರ ಏರಿಕೆ: ಬಿಜೆಪಿ ಪ್ರತಿಭಟನೆ
ನಂದಿನಿ ಹಾಲಿನ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಹಾಲಿನ ದರ ಕಡಿಮೆ ಮಾಡುವಂತೆ ಮನವಿ ಅರ್ಪಿಸಿದರು.
![15 vivke poshaka 02.07.2024 `ನಲವತ್ತು ದಾಟಿದರೆ ಕಣ್ಣಿನ ತಪಾಸಣೆ ಕಡ್ಡಾಯ’](https://janathavani.com/wp-content/uploads/2024/07/15-vivke-poshaka-02.07.2024-580x440.jpg)
`ನಲವತ್ತು ದಾಟಿದರೆ ಕಣ್ಣಿನ ತಪಾಸಣೆ ಕಡ್ಡಾಯ’
40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜೆಜೆಎಂಎಂಸಿ ಪ್ರಾಧ್ಯಾಪಕ ಹಾಗೂ ನೇತ್ರ ತಜ್ಞ ಡಾ.ಶಿವಯೋಗಿ ಆರ್.ಕುಸಗೂರ್ ಸಲಹೆ ನೀಡಿದರು.
![17 basavalinga shre 02.07.2024 ಮಾನವನಲ್ಲಿ ಅರಿವಿನ ಜ್ಞಾನ ಹೆಚ್ಚಲಿ : ಮು.ಬಸವಲಿಂಗ ಶ್ರೀಗಳು](https://janathavani.com/wp-content/uploads/2024/07/17-basavalinga-shre-02.07.2024-580x440.jpg)
ಮಾನವನಲ್ಲಿ ಅರಿವಿನ ಜ್ಞಾನ ಹೆಚ್ಚಲಿ : ಮು.ಬಸವಲಿಂಗ ಶ್ರೀಗಳು
ಮಾನವನ ಜೀವನದಲ್ಲಿ ದುಃಖದ ತಾಪಮಾನ ಕಡಿಮೆಯಾಗಬೇಕೆಂದರೆ, ಅರಿವಿನ ಜ್ಞಾನ ಹೆಚ್ಚಾಗಬೇಕು ಎಂದು ಹಾಲಕೆರೆ ಸಂಸ್ಥಾನದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
![20 umesh nayka 02.07.2024 ಕಲಾವಿದ ಉಮೇಶ್ನಾಯ್ಕಗೆ ಸನ್ಮಾನ](https://janathavani.com/wp-content/uploads/2024/07/20-umesh-nayka-02.07.2024-580x440.jpg)
ಕಲಾವಿದ ಉಮೇಶ್ನಾಯ್ಕಗೆ ಸನ್ಮಾನ
ಆನಗೋಡು ಗ್ರಾಮದಲ್ಲಿ ನಡೆದ ಮಾಯಕೊಂಡ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಕುಂದು ಕೊರತೆ ಪರಿಹಾರ ಸಮಾವೇಶದಲ್ಲಿ ಜಾನಪದ ಕಲಾವಿದ ಉಮೇಶ್ ನಾಯ್ಕ್ ಅವರನ್ನು ಸನ್ಮಾನಿಸಿದರು.
![19 thief 02.07.2024 ಮೂವರು ಕಳ್ಳರ ಬಂಧನ : 29 ಬೈಕ್ ವಶ](https://janathavani.com/wp-content/uploads/2024/07/19-thief-02.07.2024-580x440.jpg)
ಮೂವರು ಕಳ್ಳರ ಬಂಧನ : 29 ಬೈಕ್ ವಶ
ರಾಣೇಬೆನ್ನೂರು : ಹಿರೇಕೆರೂರಿನ ಮೆಹಮೂದ್ ಮುಗಳಗೇರಿ, ಖಲಂದರ ಪಠಾಣ, ಹುಬ್ಬಳ್ಳಿಯ ತನ್ವೀರ ಲಕ್ಷ್ಮೇಶ್ವರ ಎನ್ನುವ ಕಾರ್ಯನಿರತ ಬೈಕ್ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸಿ, ಅವರಿಂದ 23 ಲಕ್ಷ ಕಿಮ್ಮತ್ತಿನ 29 ವಿವಿಧ ಕಂಪನಿಯ ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
![24 mbr indira 02.07.2024 ಇಂದಿರಾ ಕ್ಯಾಂಟಿನ್ : ಅಭಿಪ್ರಾಯ ಸಂಗ್ರಹಿಸಿದ ಎಸಿ](https://janathavani.com/wp-content/uploads/2024/07/24-mbr-indira-02.07.2024-580x440.jpg)
ಇಂದಿರಾ ಕ್ಯಾಂಟಿನ್ : ಅಭಿಪ್ರಾಯ ಸಂಗ್ರಹಿಸಿದ ಎಸಿ
ಮಲೇಬೆನ್ನೂರು : ಪಟ್ಟಣದ ಜಿಬಿಎಂ ಶಾಲೆಯ ಆವರಣದಲ್ಲಿ ಶಾಲಾ ಕೊಠಡಿಗಳನ್ನು ಒಡೆದು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವ ಸ್ಥಳಕ್ಕೆ ಸೋಮವಾರ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
![21 jgl madaka 02.07.2024 ಮಾದಕ ವ್ಯಸನದಿಂದ ಮಕ್ಕಳ ಭವಿಷ್ಯಕ್ಕೆ ಮಾರಕ](https://janathavani.com/wp-content/uploads/2024/07/21-jgl-madaka-02.07.2024-580x440.jpg)
ಮಾದಕ ವ್ಯಸನದಿಂದ ಮಕ್ಕಳ ಭವಿಷ್ಯಕ್ಕೆ ಮಾರಕ
ಜಗಳೂರು : ಮಾದಕ ವ್ಯಸನ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮಾರಕ ಎಂದು ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಕಳವಳ ವ್ಯಕ್ತಪಡಿಸಿದರು.
![18 uchita 02.07.2024 ಮಕ್ಕಳಿಗೆ ಉಚಿತ ಪಠ್ಯ ಸಾಮಗ್ರಿ ವಿತರಣೆ](https://janathavani.com/wp-content/uploads/2024/07/18-uchita-02.07.2024-580x440.jpg)
ಮಕ್ಕಳಿಗೆ ಉಚಿತ ಪಠ್ಯ ಸಾಮಗ್ರಿ ವಿತರಣೆ
ನಗರದ ಹಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ, ಮಹಾಂತೇಶ ಒಣರೊಟ್ಟಿ ಅವರು ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸ್ಗಳನ್ನು ದಾನವಾಗಿ ನೀಡಿದರು.
![03 jgl 01.07.2024 ಅಲ್ಪ ಅಂತರ್ಜಲ ಜಾಗಕ್ಕೆ ಖುಷ್ಕಿ ತೋಟಗಾರಿಕೆ ವರದಾನ](https://janathavani.com/wp-content/uploads/2024/07/03-jgl-01.07.2024-580x440.jpg)
ಅಲ್ಪ ಅಂತರ್ಜಲ ಜಾಗಕ್ಕೆ ಖುಷ್ಕಿ ತೋಟಗಾರಿಕೆ ವರದಾನ
ಜಗಳೂರು : ಅಂತರ್ಜಲ ಕಡಿಮೆಯಿರುವ ಜಾಗದಲ್ಲಿ ಖುಷ್ಕಿ ತೋಟಗಾರಿಕೆ ವರದಾನವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
![05 bharamasagara 01.07.2024 ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಉದಾಸೀನ ಬೇಡ](https://janathavani.com/wp-content/uploads/2024/07/05-bharamasagara-01.07.2024-580x440.jpg)
ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಉದಾಸೀನ ಬೇಡ
ಭರಮಸಾಗರ : ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಉದಾಸೀನ ಮಾಡದೇ ಸರ್ಕಾರ ಒದಗಿಸಿದ ಸೌಲಭ್ಯವನ್ನು ತಪ್ಪದೇ ಬಳಸಿಕೊಳ್ಳಬೇಕೆಂದು ಚಿತ್ರದುರ್ಗದ ಮೈನಾರಿಟಿ ಇಲಾಖೆಯ ಅಧಿಕಾರಿ ಕಾಂತರಾಜ್ ಹೇಳಿದರು.
![04 hrp 01.07.2024 ಹರಪನಹಳ್ಳಿ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ](https://janathavani.com/wp-content/uploads/2024/07/04-hrp-01.07.2024-580x440.jpg)
ಹರಪನಹಳ್ಳಿ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಹರಪನಹಳ್ಳಿ : ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಮಗಾರಿಗಳಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಭೂಮಿ ಪೂಜೆ ನೆರವೇರಿಸಿದರು.
![06 sp 01.07.2024 ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ : ಎಸ್ಪಿ](https://janathavani.com/wp-content/uploads/2024/07/06-sp-01.07.2024-580x440.jpg)
ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ : ಎಸ್ಪಿ
ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಯಿತು. ಈ ವೇಳೆ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
![10 rnr 01.07.2024 ಸಂಸ್ಕೃತಿಯೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು](https://janathavani.com/wp-content/uploads/2024/07/10-rnr-01.07.2024-580x440.jpg)
ಸಂಸ್ಕೃತಿಯೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು
ರಾಣೇಬೆನ್ನೂರು : ಸ್ಥಳಿಯ ರಾ.ತಾ.ಶಿ. ಸಂಸ್ಥೆಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾ ವಿದ್ಯಾಲಯದ 2023-24ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು.
![11 upsc 01.07.2024 ಯುಪಿಎಸ್ಸಿ ಸಾಧಕಿಗೆ ಸನ್ಮಾನ ಗೌರವ](https://janathavani.com/wp-content/uploads/2024/07/11-upsc-01.07.2024-580x440.jpg)
ಯುಪಿಎಸ್ಸಿ ಸಾಧಕಿಗೆ ಸನ್ಮಾನ ಗೌರವ
ಶಾಮನೂರಿನ ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿ ಪುತ್ರಿ ಸೌಭಾಗ್ಯ ಬೀಳಗಿಮಠ್ ಯುಪಿಎಸ್ಸಿ ಪರೀಕ್ಷೆಯಲ್ಲಿ 101ನೇ ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
![12 ramakrishna 01.07.2024 ರಾಮಕೃಷ್ಣ ಶಾಲೆಯಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ](https://janathavani.com/wp-content/uploads/2024/07/12-ramakrishna-01.07.2024-580x404.jpg)
ರಾಮಕೃಷ್ಣ ಶಾಲೆಯಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ
ಇಲ್ಲಿನ ಡಿಸಿಎಂ ಟೌನಶಿಪ್ನಲ್ಲಿನ ಶ್ರೀ ರಾಮಕೃಷ್ಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಾಡ ಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಿಸಲಾಯಿತು.
![15 kuruhinashetty 01.07.2024 ಕುರುಹಿನಶೆಟ್ಟಿ ಸಮಾಜ ಮಹಿಳಾ ಮಂಡಳಿ ಉದ್ಘಾಟನೆ](https://janathavani.com/wp-content/uploads/2024/07/15-kuruhinashetty-01.07.2024-580x440.jpg)
ಕುರುಹಿನಶೆಟ್ಟಿ ಸಮಾಜ ಮಹಿಳಾ ಮಂಡಳಿ ಉದ್ಘಾಟನೆ
ಹರಿಹರ : ನಗರದ ಹೊಳೆ ಮೆಟ್ಟಿಲು ರಸ್ತೆ ಯಲ್ಲಿರುವ ಕಾಶಿ ನೀಲಕಂಠೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಕುರುಹಿನಶೆಟ್ಟಿ ಸಮಾಜ ಮಹಿಳಾ ಮಂಡಳಿ ಮತ್ತು ಹೊಲಿಗೆ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಲಾಯಿತು.