ರಾಣೇಬೆನ್ನೂರಿನಲ್ಲಿ ಇಂದು ವೀರಾಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ

ಶ್ರೀ ಸಿದ್ದಾರೂಢ ನಗರದಲ್ಲಿ ಶ್ರೀ ವೀರಾಂ ಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಆಮೆ ಹಾಗೂ ಗರುಡ ಕಂಬದ ಉದ್ಘಾಟನಾ ಕಾರ್ಯ ಕ್ರಮ, ಧರ್ಮ ಸಭೆ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಬೆಳಗಿನಿಂದ ರಾತ್ರಿ 9ಗಂಟೆ ವರೆಗೆ ಅನ್ನ ಸಂತರ್ಪಣೆ ಇದೆ. ಸಿದ್ದಾರೂಢ ಮಠದ ಮಲ್ಲಯ್ಯಸ್ವಾಮಿ, ಲಿಂಗದಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯರು, ವಿವೇಕಾನಂದಾಶ್ರಮದ ಪ್ರಕಾಶಾನಂದ ಮಹಾರಾಜ, ರಟ್ಟಿಹಳ್ಳಿ ಶ್ರೀ ಶಿವಲಿಂಗ ಶಿವಾಚಾರ್ಯರು, ನಂದಿಗುಡಿ ಸಿದ್ದರಾಮೇಶ್ವರ ಶ್ರೀಗಳು ಭಾಗವಹಿಸುವರು. ಸಂಜೆ ಸ್ವರಾತ್ಮಿಕ ಸಂಗೀತ ಕಾರ್ಯಕ್ರಮ ನಡೆಯಲಿದೆ.‌ ಆರ್.ಎನ್. ಕೆಂಚರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೃಷ್ಣಪ್ಪ ಬ್ಯಾಡಗಿ, ಪ್ರಭಾಕರ  ಮುದಗಲ್ಲ, ಶ್ರೀ ನಿವಾಸ ಕಾಕಿ ಉಪಸ್ಥಿತರಿರುವರು.

error: Content is protected !!