ನಗರದಲ್ಲಿ ಇಂದು ಕದಳಿ ವೇದಿಕೆಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ

ಕದಳಿ ಮಹಿಳಾ ವೇದಿಕೆ,  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ  ಇಂದು ಬೆಳಿಗ್ಗೆ 10.30ಕ್ಕೆ 152ನೇ ಕದಳಿ ಕಮ್ಮಟದಲ್ಲಿ ಅಕ್ಕಮಹಾದೇವಿ ಜಯಂತಿ ಹಾಗೂ ದತ್ತಿ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ.

ಗುರು ಬಸವ ಮಂಟಪದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಜಿ.ಎಸ್. ಸುನೀತಾ, ಸೂರ್ಯಪ್ರಭಾ ಸುರೇಶ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. 

ರಾಜಶೇಖರಯ್ಯ ಮತ್ತು ಆರ್. ದಯಾನಂದ್ ದತ್ತಿ (ದಾಸೋಹಿಗಳು ಶರಣೆ ಪಂಕಜ ದಯಾನಂದ್), ಮಾಗನೂರು ಭರಮಮ್ಮ ಮತ್ತು ಬಿ.ಸಿ. ಆಲದ ಕಟ್ಟಿ ದತ್ತಿ (ದಾಸೋಹಿ ಶರಣ ಮಾಗನೂರು ಗುರುಪಾದಪ್ಪ) ಕಾರ್ಯಕ್ರಮಗಳು ನಡೆಯಲಿದ್ದು, ಎ.ವಿ.ಕೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕವಿತಾ ಆರ್.ಜಿ. ಅಕ್ಕನ ಹೋರಾಟದ ವಿಷಯವಾಗಿ ದತ್ತಿ ಅನುಭಾವ ನೀಡುವರು. 

ಕಾರ್ಯಕ್ರಮದಲ್ಲಿ ಕೆ.ಬಿ. ಪರಮೇಶ್ವರಪ್ಪ, ವಿನೋದ ಅಜಗಣ್ಣನವರ ಮಮತಾ ನಾಗರಾಜ್, ಪ್ರಮೀಳಾ ನಟರಾಜ್, ಯಶಾ ದಿನೇಶ್, ಉಪಸ್ಥಿತರಿರು ವರು ಎಂದು ಕದಳಿ ಮಹಿಳಾ ವೇದಿಕೆಯ ಖಜಾಂಚಿ ರತ್ನ ಸಿ. ರೆಡ್ಡಿ  ತಿಳಿಸಿದರು.

error: Content is protected !!