ನಗರದಲ್ಲಿ ಇಂದು ಶ್ರೀ ಹನುಮ ಜಯಂತಿ

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದಿಂದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ನಡೆಯಲಿದೆ. ಇಂದು ಬೆಳಿಗ್ಗೆ 6.30ಕ್ಕೆ ಷೋಡಶೋಪಚಾರ ಸಹಿತ ಶ್ರೀ ಹನುಮಂತ ದೇವರ ಉತ್ಸವ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವುದು, ನಂತರ 7.30 ರಿಂದ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ 9 ಗಂಟೆಗೆ ಪವಮಾನ ಹೋಮ, 11.30ಕ್ಕೆ ಪೂರ್ಣಾಹುತಿ ಮತ್ತು ಮಧ್ಯಾಹ್ನ 12 ಕ್ಕೆ ಶ್ರೀ ಹನುಮಂತ ದೇವರ ಪ್ರಾಕಾರೋತ್ಸವ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ ತಿಳಿಸಿದ್ದಾರೆ.

error: Content is protected !!