ಲೋಕಸಭಾ ಚುನಾವಣೆಯಲ್ಲಿ ರಾಣಿ ಚೆನ್ನಮ್ಮ ಪಾರ್ಟಿ ಸ್ಪರ್ಧೆ

ದಾವಣಗೆರೆ, ಮಾ.20-  ಲೋಕಸಭಾ ಚುನಾವಣೆಯಲ್ಲಿ ರಾಣಿ ಚೆನ್ನಮ್ಮ ಪಾರ್ಟಿ ಅಭ್ಯರ್ಥಿ ದಾವಣಗೆರೆ ಕ್ಷೇತ್ರದಲ್ಲಿ   ಸ್ಪರ್ಧಿಸುವುದು ಖಚಿತವಾಗಿದ್ದು, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧೆ ನೀಡಲಿದ್ದಾರೆ ಎಂದು ಪಕ್ಷದ ಸಂಸ್ಥಾಪಕ  ಎಂ.ಬಿ.ದೇಸಾಯಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬ್ರಿಟಿಷರ ಆಧೀನದಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಲು ಹೋರಾಟ ನಡೆಸಿದವರಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಅಗ್ರಗಣ್ಯ ವೀರಮಹಿಳೆ. ಇಂತಹ ತಾಯಿಯ ಹೆಸರಿನಲ್ಲಿ ಸ್ಥಾಪಿತವಾದ ಜಾತ್ಯಾತೀತ ಪ್ರಾದೇಶಿಕ ರಾಜಕೀಯ ಪಕ್ಷವಾದ ರಾಣಿ ಚೆನ್ನಮ್ಮ ಪಾರ್ಟಿ ಈ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದಾರೆ.

error: Content is protected !!