ಸೇಫ್ ಲಾಕರ್‌ನಲ್ಲಿದ್ದ ಹಣ ಕಳ್ಳತನ: ಆರೋಪಿ ಬಂಧನ

ದಾವಣಗೆರೆ, ಜ. 17- ಸೇಫ್ ಲಾಕರ್‌ನಲ್ಲಿದ್ದ ಹಣ ಕಳ್ಳತನ ಪ್ರಕರಣ ಬೆಳಕಿಗೆ ಬಂದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯರವನಾಗತಿಹಳ್ಳಿಯ ಕಿರಣ ಕುಮಾರ್ ಕೆ.ಬಿ. (26) ಬಂಧಿತ ಆರೋಪಿ. ಈತನಿಂದ ಕಳ್ಳತನವಾಗಿದ್ದ 10,88,440 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ಕಛೇರಿಯಲ್ಲಿನ ಲಾಕರ್‌ನಲ್ಲಿದ್ದ ಹಣ ಕಳ್ಳತನವಾದ ಬಗ್ಗೆ ಅವಿನಾಶ್ ಎಂಬುವವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ  ಜ.16ರಂದು ದೂರು ನೀಡಿದ್ದರು.

ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್.ಡಿ,  ಕೆಟಿಜೆ ನಗರ ಪೊಲೀಸ್ ಠಾಣೆ  ಪೊಲೀಸ್ ನಿರೀಕ್ಷಕ ಶಶಿಧರ ಯು.ಜೆ, ಪಿಎಸ್‍ಐಗಳಾದ ಸಾಗರ್ ಅತ್ತರವಾಲಾ, ಮಂಜುಳ, ಕೆಟಿಜೆ ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ ಟಿ, ಶಂಕರ್ ಆರ್.ಜಾಧವ್, ತಿಮ್ಮಣ್ಣ ಎನ್.ಆರ್, ಮಂಜಪ್ಪ ಎಂ, ಷಣ್ಮುಖ ಕೆ, ಶಿವರಾಜ ಎಂ.ಎಸ್., ರವಿ ಲಂಬಾಣಿ, ರಾಘವೇಂದ್ರ, ಶಾಂತರಾಜ್ ಪ್ರಕರಣದ ಪತ್ತೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!