ದಾವಣಗೆರೆ, ಫೆ. 14 – ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ 12 ವರ್ಷದ ಕ್ರಿಕೆಟ್, ಟೂರ್ನಮೆಂಟ್ನಲ್ಲಿ ಬೆಂಗಳೂರಿನ ಕೆಓಸಿ ‘ಎ’ ಮಾಡ್ರನ್ ಟೀಮ್ ಪ್ರತಿನಿಧಿಸುತ್ತಿರುವ ನಗರದ ಯುವ ದಾಂಡಿಗ ಟಿ. ಕೇಶವ್ ಅವರು 103 ರನ್ಗಳನ್ನು ತಂದುಕೊಟ್ಟಿದ್ದಾರೆ.
64 ಬಾಲುಗಳಿಗೆ 11 ಬೌಂಡರಿಗಳು 4 ಸಿಕ್ಸ್ರ್ ಭಾರಿಸಿದ್ದಾರೆ. ಈ ಬಾಲಕನ ಆಟ ದಿಗ್ಗಜ ಕ್ರಿಕೆಟಿಗರ ಗಮನ ಸೆಳೆದಿದೆ. ದಾವಣಗೆರೆ ಕ್ರಿಕೆಟ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿರುವ ಟಿ. ಕೇಶವ್ ಅವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಸಹ 99 ರನ್ಗಳನ್ನು ತಂದು ಕೊಟ್ಟರು.
ಕೇಶವ್ ಟಿ ಅವರನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ದಾವಣಗೆರೆ ಕ್ರೀಡಾ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತು ಶಿವಗಂಗಾ ಶ್ರೀನಿವಾಸ್, ಕೆಎಸ್ಸಿಎ ತುಮಕೂರು ವಲಯದ ಸಂಚಾಲಕ ಶಶಿಧರ್, ವೈಬಿಸಿಸಿಯ ರಾಘವೇಂದ್ರ, ವರದಿಗಾರರ ಕೂಟದ ಅಧ್ಯಕ್ಷ ಬಡದಾಳ್ ನಾಗರಾಜ್, ಗೋಪಾಲಕೃಷ್ಣ, ಶಾಮನೂರು ಶಿವಶಂಕರಪ್ಪನವರ ಆಪ್ತ ಸಹಾಯಕ ಎಸ್. ರವಿಕುಮಾರ್, ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ತಿಮ್ಮೇಶ್, ಬಾಲರಾಜ್, ಧ್ರುವ, ಮನೋಜ್, ರಮೇಶ್ ಮತ್ತು ಇನ್ನಿತರೆ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.