ಶಾಮನೂರು ಪ್ರವೀಣ್, ಸುಪ್ರೀತ್‌ಗೆ ಜಿಲ್ಲಾ ಕೈಗಾರಿಕಾ ಸಾಧಕ ಪ್ರಶಸ್ತಿ

ಶಾಮನೂರು ಪ್ರವೀಣ್, ಸುಪ್ರೀತ್‌ಗೆ  ಜಿಲ್ಲಾ ಕೈಗಾರಿಕಾ ಸಾಧಕ ಪ್ರಶಸ್ತಿ

ದಾವಣಗೆರೆ, ಫೆ.14- ನಗರದ ಮಲ್ಲಿಕಾರ್ಜುನ ಇಂಡಸ್ಟ್ರೀಸ್ ಪಾಲುದಾರರಾದ ಶಾಮನೂರು ಜಿ.ಕೆ. ಪ್ರವೀಣ್, ಜಿ.ಎಂ. ಸುಪ್ರೀತ್ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಉದ್ಯಮಿ  ಪ್ರಶಸ್ತಿ ಪಡೆದಿದ್ದಾರೆ. 

ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ರಾಜ್ಯಪಾಲರಾದ ಥಾವರ್‌ಸಿಂಗ್ ಗೆಹ್ಲೋಟ್ ಅವರು ಪ್ರವೀಣ್ ಮತ್ತು ಸುಪ್ರೀತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೃಷಿ ಸಚಿವ ಚಲುವರಾಯ ಸ್ವಾಮಿ ಮತ್ತಿತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!