ದಾವಣಗೆರೆ, ಫೆ.14- ಶ್ರೇಷ್ಠ ದಿವ್ಯಾಂಗನ್ 2024 ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದಿರುವ ಕರ್ನಾಟಕ ಹಿಮೋಫಿಲಿಯ ಸೊಸೈಟಿಯ ಅಧ್ಯಕ್ಷರೂ ಆದ ಜೆಜೆಎಂ ವೈದ್ಯಕೀಯ ಕಾಲೇಜಿನ ಪೆಥಾಲಜಿ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ಅವರನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಭಿನಂದಿಸಿದ್ದಾರೆ. ಡಾ. ಸುರೇಶ್ ಹನಗವಾಡಿ ಅವರ ಶ್ರಮ ಮತ್ತು ಬದ್ಧತೆಯನ್ನು ಎಸ್ಸೆಸ್ ಪ್ರಶಂಸಿಸಿದ್ದಾರೆ.
ಡಾ. ಹನಗವಾಡಿಗೆ ಎಸ್ಸೆಸ್ ಅಭಿನಂದನೆ
