ಚಂಚಲ ಮನಸ್ಸು ಸತ್ಯವನ್ನು ಗ್ರಹಿಸುವುದಿಲ್ಲ

ಚಂಚಲ ಮನಸ್ಸು ಸತ್ಯವನ್ನು ಗ್ರಹಿಸುವುದಿಲ್ಲ

ದಾವಣಗೆರೆ, ಮೇ 27- ಚಂಚಲ ಮನಸ್ಸು ಸತ್ಯವನ್ನು ಗ್ರಹಿಸಲು ಸಾಧ್ಯವಿಲ್ಲ, ಸತ್ಯವನ್ನು ಗ್ರಹಿಸದೇ ಪರಮಾತ್ಮನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ತದ ಏಕಾಗ್ರತೆಯೇ ಇದಕ್ಕೆ ಪರಿಹಾರ ಎಂದು ಹಿರಿಯ ಪತ್ರಕರ್ತ  ಎಚ್.ಬಿ. ಮಂಜುನಾಥ ಹೇಳಿದರು. 

ಸಾಲಿಗ್ರಾಮ ಕೂಟ ಮಹಾ ಜಗತ್ತಿನ ದಾವಣಗೆರೆ ಅಂಗ ಸಂಸ್ಥೆ  ವತಿಯಿಂದ ನಗರದ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಮೊನ್ನೆ ಏರ್ಪಾಡಾಗಿದ್ದ ಶ್ರೀ ನರಸಿಂಹ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು. 

ಶಾಸ್ತ್ರಾಧ್ಯಯನವಾಗಲೀ, ಭಕ್ತಿ ಸಮರ್ಪಣೆಯೇ ಆಗಲೀ, ಭಗವದ್ ಸಾಕ್ಷಾತ್ಕಾರಕ್ಕಾಗಲೀ, ಸತ್ಯಾನ್ವೇಷಣೆ ಗಾಗಲೀ ಚಿತ್ತ ಏಕಾಗ್ರತೆ ಅವಶ್ಯ, ಇದು ಉಂಟಾದಾಗ ಯಾವುದೂ ನಮಗೆ ಕಷ್ಟ ಮತ್ತು ದುಸ್ತರ  ಎನಿಸುವುದಿಲ್ಲ, ಅಧ್ಯಯನವೇ ಆಗಲಿ, ಧ್ಯಾನವೇ ಆಗಲಿ, ಆರಾಧನೆಯೇ ಆಗಲಿ, ಭಜನೆ,  ಶ್ರವಣವೇ ಆಗಲಿ ಏಕಾಗ್ರತೆ ಯಿಂದ ಮಾತ್ರ ಮನನ ಸಾಧ್ಯ ಎಂಬುದನ್ನು ಸ್ವಾರಸ್ಯಕರ ಉದಾಹರ ಣೆಗಳ ಸಹಿತ ವಿವರಿಸಿದರು. 

ಕೂಟ ಮಹಾ ಜಗತ್ತು ದಾವಣಗೆರೆ ಅಂಗ ಸಂಸ್ಥೆಯ ನೂತನ ಅಧ್ಯಕ್ಷ  ಮೋತಿ ಎನ್. ರಾಘವೇಂದ್ರ, ಪದಾಧಿಕಾರಿಗಳಾದ  ಕೆ. ಶಿವರಾಮ ಕಾರಂತ, ಬಾಲಕೃಷ್ಣ ವೈದ್ಯ, ಸುಬ್ರ ಹ್ಮಣ್ಯ ಹೊಳ್ಳ, ಶ್ರೀನಿವಾಸ ಕಾರಂತ, ಮೋತಿ ಪಿ. ಪರಮೇಶ್ವರ್ ರಾವ್, ಕೇಶವಮೂರ್ತಿ ಕಾರಂತ, ಮೋತಿ ಆರ್. ಸುಬ್ರಮಣ್ಯ, ಗುರು ಪ್ರಸಾದ್ ಮುಂತಾದವರು ಭಾಗವಹಿಸಿದ್ದರು. 

ರೋಹಿಣಿ ಹೊಳ್ಳ ಮತ್ತು ಸಂಗಡಿಗರು ಭಜನೆ ನೆರವೇರಿಸಿದರೆ, ಹರೀಶ್ ಹೊಳ್ಳ ಮುಂತಾದವರು ಪೂಜೆಯನ್ನೂ, ಹರೀಶ್ ಐತಾಳ್ ತಂಡದವರು ಚೆಂಡೆ ಸೇವೆಯನ್ನೂ ನೆರವೇರಿಸಿದರು.

error: Content is protected !!