ನಾಳೆ ಕುರುಬ ಸಮಾಜದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ನಾಳೆ ಕುರುಬ ಸಮಾಜದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಹೊನ್ನಾಳಿ, ಮೇ 2- ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರುಬ ಸಮಾಜದ ಕಾರ್ಯಕರ್ತರ ಸಭೆಯನ್ನು ನಾಳೆ ದಿನಾಂಕ 4ರ ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ಬಾಪೂಜಿ ಸಮುದಾಯ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೊನ್ನಾಳಿ ಕುರುಬ ಸಮಾಜದ ಮುಖಂಡರಾದ ಅರಾಕ್ ಸಿದ್ದಪ್ಪ ಹೇಳಿದರು.

ಹೊನ್ನಾಳಿಯಲ್ಲಿ ಇಂದು ಜಿಲ್ಲಾ ಕುರುಬ ಸಮಾಜದ ಕಾಂಗ್ರೆಸ್ ಕಾರ್ಯಕರ್ತ ಮುಖಂಡರ ಸಭೆಯನ್ನುದ್ದೇಶಿಸಿ, ಮಾತನಾಡಿದರು.

ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷ ಮುಖಂಡ ಹೆಚ್.ಎಂ.ರೇವಣ್ಣ ಆಗಮಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಶಿವಕುಮಾರ್ ಒಡೆಯರ್ ವಹಿಸಲಿದ್ದು,  ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ಚರ್ಚಿಸಲಾಗುವುದೆಂದರು.

ದಾವಣಗೆರೆ ಚಂದ್ರಶೇಖರ್ ಒಡೆಯರ್, ಶಿವಕುಮಾರ್ ಒಡೆಯರ್, ಆನಂದಪ್ಪ, ಲಿಂಗಣ್ಣ, ದಿಳ್ಯಪ್ಪ, ಶಿವಣ್ಣ ಹೊನ್ನಾಳಿ ಶಿವಯೋಗಿ ಇನ್ನಿತರರಿದ್ದರು.

error: Content is protected !!