ಹರಿಹರ ನಗರಕ್ಕೆ ಇಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್

ಹರಿಹರ ನಗರಕ್ಕೆ ಇಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್

ಬೃಹತ್ ರೋಡ್ ಶೋ

ಹರಿಹರ, ಮೇ 2- ಇದೇ ದಿನಾಂಕ 7 ರಂದು ನಡೆಯುವ ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಾಳೆ ದಿನಾಂಕ 3 ರ ಶುಕ್ರವಾರ ಸಂಜೆ 6 ಗಂಟೆಗೆ ಹರಿಹರ ನಗರದಲ್ಲಿ ಬೃಹತ್ ರೋಡ್ ಶೋ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಪಕ್ಕೀರಸ್ವಾಮಿ ಮಠದ ಆವರಣದಿಂದ ಬೃಹತ್ ರೋಡ್ ಶೋ ಆರಂಭಗೊಂಡು, ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತದ ಮೂಲಕ ಸಂಚರಿಸಿ, ತುಂಗಭದ್ರಾ ನದಿಯ ಹತ್ತಿರದ ನಾಡ್ ಬಂದ್ ಷಾವಲಿ ದರ್ಗಾದ ಆವರಣಕ್ಕೆ ಅಂತ್ಯಗೊಳ್ಳಲಿದೆ. 

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತ ನಾಡಿ, ತಾಲ್ಲೂಕಿನ ಬೈರನಪಾದ ನೀರಾವರಿ ಯೋಜನೆ, ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಾರಥಿ ಬಳಿ ಕೈಗಾರಿಕಾ ಕೇಂದ್ರ, ಸೇರಿದಂತೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಈಗಾಗಲೇ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ರವರೆಗೆ ಹಲವು ಬಾರಿ ಗಮನಕ್ಕೆ ತಂದಾಗ ಅವರು ಕೂಡ ಎಲ್ಲಾ ಕೆಲಸಗಳಿಗೆ ಸಹಮತ ವ್ಯಕ್ತಪಡಿಸಿದ್ದು, ಶೇ.60 ರಷ್ಟು ಕಾಗದ ಪತ್ರಗಳ ಸಿದ್ದತೆ ನಡೆದಿದ್ದು, ಇನ್ನೂ ಕೆಲವೆ ದಿನಗಳಲ್ಲಿ ತಾಲ್ಲೂಕಿನ ಅನೇಕ ಸಮಸ್ಯೆಗಳನ್ನು ಇತ್ಯರ್ಥಕ್ಕೆ ಬರುತ್ತವೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭಾರೀ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದು, ಈ ಬಾರಿ ಅವರಿಗೆ ತಾಲ್ಲೂಕಿನಿಂದ ಸುಮಾರು 15-20 ಸಾವಿರ ಲೀಡ್ ಕೊಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುರೇಶ್ ಹಾದಿಮನಿ, ಬಿ.ರೇವಣಸಿದ್ದಪ್ಪ, ಮಹಮ್ಮದ್ ಪೈರೋಜ್, ಮಾಜಿ ನಗರಸಭೆ ಸದಸ್ಯ ಹಬೀಬ್ಉಲ್ಲಾ, ದಾದಾಪೀರ್ ಭಾನುವಳ್ಳಿ, ಇಸ್ಮಾಯಿಲ್, ಶಶಿಕಾಂತ್ ರೆಡ್ಡಿ ಇತರರು ಹಾಜರಿದ್ದರು.

error: Content is protected !!