ನಮ್ಮನ್ನು ರಕ್ಷಿಸುವ, ದೇಶದ ಹಿತ ಕಾಪಾಡುವ ವ್ಯಕ್ತಿಗೆ ಮತ ಹಾಕಿ

ನಮ್ಮನ್ನು ರಕ್ಷಿಸುವ, ದೇಶದ ಹಿತ ಕಾಪಾಡುವ ವ್ಯಕ್ತಿಗೆ ಮತ ಹಾಕಿ

ಮತದಾನದ ಅರಿವು ಕಾರ್ಯಕ್ರಮದಲ್ಲಿ ವಕೀಲ ಎಲ್. ದಯಾನಂದ್ 

ದಾವಣಗೆರೆ, ಮೇ 1- ಮತದಾರರು  ಯಾವುದೇ ಕಾರಣಕ್ಕೂ ಆಸೆ ಆಮಿಷಕ್ಕೆ ಒಳಗಾ ಗದೇ ಉತ್ತಮ ನಾಯಕತ್ವ ಇರುವವರನ್ನು  ಆಯ್ಕೆ ಮಾಡಬೇಕು  ಎಂದು ಜಿಲ್ಲಾ ಅದಿವಕ್ತಾ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಹಿರಿಯ  ನ್ಯಾಯವಾದಿ ಎಲ್. ದಯಾನಂದ  ಮನವಿ ಮಾಡಿದರು.

ನಗರದ  ಕರೂರು ಇಂಡಸ್ಟ್ರೀಯಲ್ ಏರಿಯದಲ್ಲಿರುವ ಬಸವೇಶ್ವರ ಗಾರ್ಮೆಂಟ್ ನಲ್ಲಿ  ಅಧಿವಕ್ತಾ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತದ  ಜಿಲ್ಲಾ ಘಟಕದ ವತಿಯಿಂದ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅಲ್ಲಿನ ಕೆಲಸಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.  

`ಮತದಾನ ನಿಮ್ಮ ಹಕ್ಕು, ನೀವು ತಪ್ಪದೇ ಮತ ಚಲಾಯಿಸಿ,     ನಮ್ಮನ್ನು ರಕ್ಷಿಸುವ, ದೇಶದ ಹಿತ ಕಾಪಾಡಲು ಇರುವ ವ್ಯಕ್ತಿಗೆ  ಮತ ಹಾಕಿ ಎಂದು ಹೇಳಿದರು.  ನಮ್ಮ ಮತ ನಮ್ಮ ಭವಿಷ್ಯ, ಚುನಾವಣೆಯಲ್ಲಿ ಹಬ್ಬದ ರೀತಿ  ಭಾಗವಹಿಸಿ ಮತದಾನ ಮಾಡಿ  ಎಂದೂ ಅವರು ಸಲಹೆ ನೀಡಿದರು  

ಅಧ್ಯಕ್ಷತೆಯನ್ನು ಗಾರ್ಮೆಂಟ್ ಮಾಲೀಕ  ಬಾದಾಮಿ ಜಯಣ್ಣ ವಹಿಸಿದ್ದರು.   ಮತ್ತೋರ್ವ  ಮಾಲೀಕ  ಬಾದಾಮಿ ಮುರುಗೇಶ್, ಲೋಕಾಯುಕ್ತ ಅಭಿಯೋಜ ಕರಾದ ಸಿ. ಪಿ. ಅನಿತಾ,  ವಕೀಲರುಗಳಾದ ಬಿ. ಬಿ. ರಾಮಪ್ಪ, ಎಸ್ ಹೆಚ್. ವಿನಯ ಕುಮಾರ್, ಹೆಚ್ ಶಿವಣ್ಣ, ಎಲ್. ತಿಪ್ಪೇಶ್,  ಡಿ. ಹೆಚ್. ರಾಜು, ಶಂಕರ್, ಶ್ರೀಮತಿ ವನಜಾಕ್ಷಿ, ನೋಟರಿ ನೀಲಕಂಠ ಮತ್ತಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.  

error: Content is protected !!