ಕಣದಲ್ಲಿ ಉಳಿದ ವಿನಯ್

ಕಣದಲ್ಲಿ ಉಳಿದ ವಿನಯ್

ಸಿಲಿಂಡರ್ ಚಿಹ್ನೆ ನೀಡಿದ ಆಯೋಗ

ದಾವಣಗೆರೆ, ಏ.22- ದಾವಣ ಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ಈ ವದಂತಿಗೆ ಈಗ ತೆರೆ ಬಿದ್ದಿದೆ. ಚುನಾವಣಾ ಕಣದಲ್ಲಿ ಗೆಲುವಿಗೆ ಸೆಣಸಾಡಲಿದ್ದಾರೆ. 

ನಾಮಪತ್ರ ವಾಪಸ್ ಪಡೆಯಲು  ಇಂದು ಕೊನೆ ದಿನವಾಗಿತ್ತು. ಇನ್ನು ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಗುರುತನ್ನು ಚುನಾವಣಾ ಆಯೋಗ ನೀಡಿದೆ. 

ಚಿಹ್ನೆ ಸಿಕ್ಕ ಬಳಿಕ ಮಾತನಾಡಿದ ವಿನಯ್ ಕುಮಾರ್, ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದರು. ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಆದ್ರೆ, ವಾಪಸ್ ಪಡೆದಿಲ್ಲ. ಕಣದಲ್ಲಿ ಉಳಿದಿದ್ದೇನೆ. ದಿನಕಳೆದಂತೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು. 

ನನಗೆ ಸಿಲಿಂಡರ್ ಚಿಹ್ನೆಯನ್ನು ಕೇಂದ್ರ ಚುನಾವಣಾ
ಆಯೋಗವು ನೀಡಿದೆ. ಸಿಲಿಂಡರ್ ಅನ್ನು ಪ್ರತಿಯೊಬ್ಬ ಮಹಿಳೆಯೂ ಉಪಯೋಗಿಸುತ್ತಾರೆ. ಜನರಿಗೆ ಬೇಕಾಗಿರುವ ಅವಶ್ಯಕವೂ ಹೌದು. ಎಲ್ಲರಿಗೂ ಗೊತ್ತಿರುವ ಸಿಲಿಂಡರ್ ಗುರುತು ನನ್ನದಾಗಿದ್ದು, ಈ ಚಿಹ್ನೆಗೆ ಮತ ಹಾಕುವ ಮೂಲಕ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.

error: Content is protected !!