ದಾವಣಗೆರೆ, ಏ. 22 – ನಗರದ ವಾರ್ಡ್ ನಂಬರ್ 17ರ ಮುದ್ದಳ್ಳಿ ತೋಟದಲ್ಲಿ ಲೋಕಸಭಾ ಚುನಾವಣಾ ಅಂಗವಾಗಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಶ್ರೀಮತಿ ಲತಿಕಾ ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ವಾರ್ಡ್ ಅಧ್ಯಕ್ಷರಾದ ಗೀತಾ ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ವಾರ್ಡ್ ಮುಖಂಡರಾದ ಜ್ಯೋತಿ ಅವರ ಸಮ್ಮುಖದಲ್ಲಿ ಮುದ್ದಳ್ಳಿ ತೋಟದ ಮಹಿಳೆಯರ ಜೊತೆ ಪೂರ್ವಭಾವಿ ಸಭೆಯನ್ನು ಇಂದು ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮಹಿಳೆಯರಿಗೆ ತಿಳಿಸುವುದರ ಮುಖಾಂತರ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ಚಲಾಯಿಸಿ ಎಂದು ವಾರ್ಡ್ ಮಹಿಳೆಯರಲ್ಲಿ ಮನವಿ ಮಾಡಿಕೊಂಡರು.