ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವಕ್ಕೆ ದವಸ-ಧಾನ್ಯ ಅರ್ಪಣೆ

ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವಕ್ಕೆ ದವಸ-ಧಾನ್ಯ ಅರ್ಪಣೆ

ಮಲೇಬೆನ್ನೂರು, ಜ.13- ಹಾವೇರಿ ಜಿಲ್ಲೆಯ ನರಸೀಪುರ ಕ್ಷೇತ್ರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14 ಮತ್ತು 15 ರಂದು ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ತೊಟ್ಟಿಲೋತ್ಸವ, ಈಗಿನ ಶ್ರೀಗಳ ಪೀಠಾರೋಹಣ ವಾರ್ಷಿಕ ಮಹೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮದ ದಾಸೋಹಕ್ಕೆ ಮಲೇಬೆನ್ನೂರಿನ ಕಡೇಮನಿ ಕುಮಾರ್‌ ಅವರು 10 ಕ್ವಿಂಟಾಲ್ ಬೆಲ್ಲವನ್ನು ದಾನವಾಗಿ ನೀಡಿದರು.

ಅಲ್ಲದೇ ಇದೇ ವೇಳೆ ಮಲೇಬೆನ್ನೂರಿನ ಗಂಗಾಮತಸ್ಥ ಸಮಾಜದ ವತಿಯಿಂದಲೂ ದವಸ-ಧಾನ್ಯವನ್ನು ಗುರುಪೀಠಕ್ಕೆ ಅರ್ಪಿಸಿದರು. ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಅಡ್ಮನಿ ಧರ್ಮಣ್ಣ, ಅಂಜಿನಪ್ಪ ಕಡೇಮನಿ, ಕಣ್ಣಾಳ್‌ ಧರ್ಮಣ್ಣ, ಕಣ್ಣಾಳ್‌ ಪರಸಪ್ಪ, ಕಣ್ಣಾಳ್‌ ಹನುಮಂತಪ್ಪ, ಕರಿಬಸಪ್ಪ ಗರ್ಭಗುಡಿ, ತುಮ್ಮಿನಕಟ್ಟಿ ಕುಮಾರ್‌, ಬೆಳ್ಳೂಡಿ ಮಂಜಪ್ಪ, ಪೂಜಾರ್‌ ಚಿಕ್ಕಣ್ಣ, ಹರಳಿ ಮಂಜಪ್ಪ, ದಿಂಡದಹಳ್ಳಿ ನಾಗಪ್ಪ ಸೇರಿದಂತೆ, ಇತರರು ಹಾಜರಿದ್ದರು.

error: Content is protected !!