ಚಳ್ಳಕೆರೆ ಗ್ರಂಥಾಲಯಕ್ಕೆ ದಿಢೀರ್ ಭೇಟಿ

ಚಳ್ಳಕೆರೆ ಗ್ರಂಥಾಲಯಕ್ಕೆ ದಿಢೀರ್ ಭೇಟಿ

ಚಳ್ಳಕೆರೆ, ಸೆ. 10- ಇಲ್ಲಿನ ಗ್ರಂಥಾಲಯಕ್ಕೆ ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಭೇಟಿ ನೀಡಿ, ಲೈಬ್ರರಿ ಸ್ವಚ್ಛತೆ, ಪುಸ್ತಕಗಳ ಕೊರತೆ  ವೀಕ್ಷಿಸಿ ತಕ್ಷಣ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರಿಗೆ ತಿಳಿಸಿದರು.

ತಾಲ್ಲೂಕು ಗ್ರಂಥಾಲಯ ಅಧಿಕಾರಿ ಡಿ. ತಿಮ್ಮರಾಯಪ್ಪ ಅವರ ಮೇಲಿನ  ಆರೋಪ ಸುಳ್ಳು ಎಂದು ತಿಳಿಸುತ್ತಾ, ಗ್ರಂಥಾಲಯದ ಓದುಗರ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಿದರು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ಹೋರಾಟಗಾರ ಬಾಬು ನಗರಂಗೆರೆ, ಹನುಮಂತಪ್ಪ, ಪತ್ರಕರ್ತರಾದ ಟಿ. ತಿಪ್ಪೇಸ್ವಾಮಿ, ಸಿ.ವೈ. ಗಂಗಾಧರ್, ಬಿ. ರಂಗಸ್ವಾಮಿ, ರಾಜು ಉಪಸ್ಥಿತರಿದ್ದರು.

error: Content is protected !!