ಬಸವಪ್ರಭು ಸ್ವಾಮೀಜಿಯವರಿಂದ 1 ದಿನ ಮೌನವ್ರತ

ಬಸವಪ್ರಭು ಸ್ವಾಮೀಜಿಯವರಿಂದ 1 ದಿನ ಮೌನವ್ರತ

ಚಿತ್ರದುರ್ಗ, ಜೂ. 25- ನಗರದ ಶ್ರೀ ಮುರುಘಾ ಮಠದಲ್ಲಿಂದು ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಎಂದಿನಂತೆ ಮುಂಜಾನೆ ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಅಲ್ಲಿಯೇ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ, ನಂತರ ಮೌನವಾಗಿದ್ದು, ಗ್ರಂಥಗಳ ಅಧ್ಯಯನ ಮಾಡಿದರು. 

ದರ್ಶನ್ಕಕಾಗಿ ಬಂದ ಭಕ್ತರಿಗೆ ಮೌನವಾಗಿಯೇ ಆಶೀರ್ವದಿಸಿದರು. `ಒಂದು ದಿನ ಪೂರ್ತಿಯಾಗಿ ಮೌನವಾಗಿರುವೆ’ ಎಂದು ನಿನ್ನೆ ದಿನ ಸ್ವಾಮೀಜಿ ಅವರು ತಮ್ಮ ವಾಟ್ಸಾಪ್ ಮತ್ತು ಫೇಸ್‍ಬುಕ್‍ನಲ್ಲಿ  ‘ಮೌನಂ ಶರಣಂ ಗಚ್ಚಾಮಿ’ ಎಂಬ ಸಂದೇಶವನ್ನು ಬರೆದಿದ್ದರು. 

ಹೀಗಾಗಿ ಸ್ವಾಮೀಜಿಯವರು ಮುಂಜಾನೆಯಿಂದಲೇ ಮೌನವಾಗಿದ್ದದ್ದು ಕಂಡುಬಂತು. ಸ್ಥಳೀಯ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ಸೇರಿದಂತೆ ನೂರಾರು ಭಕ್ತರು ದರ್ಶನಕ್ಕೆ ಬಂದರೂ ಕೂಡ ತಮ್ಮ ಮೌನ ವ್ರತವನ್ನು ಸ್ವಾಮೀಜಿ ಬಿಡಲಿಲ್ಲ. ಸ್ವಾಮೀಜಿ ತುಂಬಾ ಶಾಂತವಾಗಿ ಎಲ್ಲರಿಗೂ ಹಸನ್ಮುಖದಿಂದ ಶುಭ ಹಾರೈಸಿದರು.

ಸ್ವಾಮೀಜಿ ಆಸೀನರಾದ ಜಾಗದಲ್ಲಿ ‘ಇವತ್ತು ನಾನು ಮೌನವಾಗಿದ್ದೇನೆ’ ಎಂಬ ಸಂದೇಶವಿದ್ದುದರಿಂದ ಭಕ್ತರು ಆ ಸಂದೇಶವನ್ನು ನೋಡಿ, ಅವರು ಮೌನವಾಗಿ ಸ್ವಾಮೀಜಿಯವರಿಗೆ ನಮ ಸ್ಕರಿಸಿ, ಆಶೀರ್ವಾದವನ್ನು ಪಡೆದರು.

error: Content is protected !!