ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್‌ ಪುನರಾಯ್ಕೆ

ಮಲೇಬೆನ್ನೂರು, ಜ.24- ಇಲ್ಲಿನ ಪ್ರತಿಷ್ಠಿತ ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಬಿ. ಚಂದ್ರಶೇಖರ್‌, ಉಪಾಧ್ಯಕ್ಷರಾಗಿ ಯಲವಟ್ಟಿ ಆಂಜನೇಯ ಅವರು ಸೋಮವಾರ ನಡೆದ ಚುನಾವಣೆಯಲ್ಲಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆ ಪೂರ್ವ ಸಭೆಯಲ್ಲಿ ಸಂಘದ ಸಂಸ್ಥಾಪಕ ನಿರ್ದೇಶಕರಾದ ಹನಗವಾಡಿಯ ಬಣಕಾರ ವಿರುಪಾಕ್ಷಪ್ಪ ಅವರು, ಅಧ್ಯಕ್ಷ ಸ್ಥಾನಕ್ಕೆ ಡಾ. ಬಿ. ಚಂದ್ರಶೇಖರ್‌ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ. ಆಂಜನೇಯ ಅವರ ಹೆಸರನ್ನು ಸೂಚಿಸಿದಾಗ ಎಲ್ಲಾ ನಿರ್ದೇಶಕರು ಬೆಂಬಲಿಸಿದರು.

ಡಾ. ಬಿ. ಚಂದ್ರಶೇಖರ್‌ ಮತ್ತು ಜಿ. ಆಂಜನೇಯ ಮಾತ್ರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದಾಗ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್‌.ಜಿ. ರುದ್ರಪ್ಪ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ವಾಗಿ ಆಯ್ಕೆಯಾಗಿರುವುದನ್ನು ಪ್ರಕಟಿಸಿದರು.  

ಸಂಘದ ನಿರ್ದೇಶಕರಾದ ಹೆಚ್‌.ಜಿ. ಚಂದ್ರಶೇಖರ್‌, ಕೆ.ಜಿ. ರಂಗನಾಥ್‌, ಶ್ರೀಮತಿ ಸರೋಜಮ್ಮ ಭರ್ಮಳ್ಳಿ ಭರಮಗೌಡ, ಬೆಳ್ಳೂಡಿಯ ಗೌಡ್ರ ರವಿಶಂಕರ್‌, ಎ. ದೇವೇಂದ್ರಪ್ಪ, ಕುಂಬಳೂರಿನ ಹೆಚ್‌.ಬಿ. ಶಿವಕುಮಾರ್‌, ಹುಲ್ಲುಮನಿ ಷಣ್ಮುಖಪ್ಪ, ನಿಟ್ಟೂರಿನ ಶ್ರೀಮತಿ ನಾಗರತ್ನ ಬಿ.ಜಿ. ಧನಂಜಯ ಮತ್ತು ಜನತಾವಾಣಿ ಪತ್ರಕರ್ತ ಜಿಗಳಿ ಪ್ರಕಾಶ್‌ ಪ್ರಭಾರ ಕಾರ್ಯದರ್ಶಿ ಜಿ.ಎಂ. ನಳಿನ ಈ ವೇಳೆ ಹಾಜರಿದ್ದರು.

error: Content is protected !!