ಭತ್ತದ ವ್ಯಾಪಾರಿಯ ಆತ್ಮಹತ್ಯೆ

ದಾವಣಗೆರೆ, ಜು.22- ಸಾಲಬಾಧೆಯನ್ನು ತಾಳಲಾರದೇ ಭತ್ತದ ವ್ಯಾಪಾರಿ ಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಪಂಚಾಕ್ಷರಪ್ಪ (65) ಭತ್ತದ ವ್ಯಾಪಾರಿಯಾಗಿದ್ದು, ಈತ ಮೂಲತಃ ಹರಿಹರದ  ಕುಣೆಬೆಳಕೆರೆ ಗ್ರಾಮದವರು. ಹಲವಾರು ವರ್ಷಗಳಿಂದ ನಗರದ ಎಸ್.ಎಸ್. ಬಡಾವಣೆಯಲ್ಲಿ ನೆಲೆಸಿ ದ್ದರು. ಭತ್ತದ ವ್ಯಾಪಾರದಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಸಾಲಬಾಧೆ ಯಿಂದ ಬೇಸತ್ತು ಮನೆಯಲ್ಲಿ ಡೆತ್‍ನೋ ಟ್ ಬರೆದಿಟ್ಟು ನಗರದ ಸರ್ ಎಂ. ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ಉದ್ಯಾನವನಕ್ಕೆ ಬಂದ ಸಾರ್ವಜನಿಕರು ಇದನ್ನು ಗಮನಿಸಿ ಕೂಡಲೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!