ಕೊಟ್ಟೂರು, ಮಾ.2-ಇಲ್ಲಿನ ಜಗದ್ಗುರು ಮರುಳಸಿದ್ದೇಶ್ವರ ಸದ್ಧರ್ಮ ಪೀಠದಲ್ಲಿ ಗುರುವಾರ ಸಂಜೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರು ನಿವಾಸದ ಭೂಮಿ ಪೂಜೆಯನ್ನು ಸಚಿವ ಬಸವರಾಜ್ ಪಾಟೀಲ್ ನೆರವೇರಿಸಿದರು.
ಈ ವೇಳೆ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಹೃದಯ ತಜ್ಞ ಶೈಲೇಶ್ ಪಾಟೀಲ್ ಹಾಗೂ ಗ್ರಾ.ಪಂ ಸದಸ್ಯರು, ಪದಾಧಿಕಾರಿಗಳು ಇದ್ದರು.