ಜಮ್ಮು ಕಾಶ್ಮೀರ್, ಪಂಜಾಬ್, ರಾಜಸ್ಥಾನ್, ಮೇಘಾಲಯ, ಅಸ್ಸಾಂ ಹೀಗೆ ದೇಶದ ಹಲವು ಗಡಿ ಭಾಗಗಳಲ್ಲಿ ತಾಯ್ನಾಡಿನ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ, ತನ್ನ ಹುಟ್ಟೂರಾದ ಬಲ್ಲೂರಿಗೆ ಇಂದು ಆಗಮಿಸುತ್ತಿರುವ ಬಸವರಾಜ್ ಅವರಿಗೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದ ವತಿಯಿಂದ ಹಾಗೂ ದೇಶಭಕ್ತ ಜನತೆಯಿಂದ ಅದ್ದೂರಿ ಸ್ವಾಗತ ನಡೆಯಲಿದೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜನಶತಾಬ್ದಿ ರೈಲಿನ ಮುಖಾಂತರ ಬಸವರಾಜ್ ಆಗಮಿಸುತ್ತಿದ್ದಾರೆ.