ಶಿವಮೊಗ್ಗ ಹೆದ್ದಾರಿಯಲ್ಲಿ ಗುಂಡಿಗಳು : ಸಂಚಾರಕ್ಕೆ ತೊಂದರೆ

ಶಿವಮೊಗ್ಗ ಹೆದ್ದಾರಿಯಲ್ಲಿ ಗುಂಡಿಗಳು : ಸಂಚಾರಕ್ಕೆ ತೊಂದರೆ

ಮಲೇಬೆನ್ನೂರು, ಜು. 24 – ಸತತ ಮಳೆಯಿಂದಾಗಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ಶಿವಮೊಗ್ಗ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಕುಂಬಳೂರಿನಿಂದ ಮಲೇಬೆನ್ನೂರಿನ ನೀರಾವರಿ ಇಲಾಖೆವರೆಗೆ ಹೆದ್ದಾರಿಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಈಗಾಗಲೇ ಅನೇಕ ಬೈಕ್ ಸವಾರರು ಈ ಗುಂಡಿಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. 

ದೊಡ್ಡ ಅಪಘಾತಗಳು ಆಗುವ ಮೊದಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗ ಬೇಕೆಂದು ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಮಾಜಿ ಅಧ್ಯಕ್ಷ ಓ.ಜಿ.ರುದ್ರುಗೌಡ, ಪುರಸಭೆ ಸದಸ್ಯ ಎ.ಆರೀಫ್ ಅಲಿ ಮತ್ತು ಕುಂಬಳೂರಿನ ಎಂ.ವಾಸುದೇವಮೂರ್ತಿ ಮನವಿ ಮಾಡಿದ್ದಾರೆ.

error: Content is protected !!