ಕಾರ್ಯಕರ್ತರಿಗೆ ಬೆಲೆ ನೀಡದ ಸಿದ್ದೇಶ್ವರ : ಎಲ್.ಡಿ. ಗೋಣೆಪ್ಪ

ದಾವಣಗೆರೆ, ಮೇ 1- ಬಿಜೆಪಿಯಲ್ಲಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಸೇರಬೇಕಾಯಿತು ಎಂದು ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಖಾಯಿಲೆಗೆ ತುತ್ತಾದ ದಲಿತ ಬಡ ಬಾಲಕನಿಗೆ ಪ್ರಧಾನ ಮಂತ್ರಿ ಕೋಟಾದಿಂದ ಸಹಾಯ ಮಾಡುವಂತೆ ಕೋರಿಕೊಂಡರೂ ಸ್ಪಂದಿಸಲಿಲ್ಲ. ಜಿಎಂಐಟಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೊಮ್ಮಗಳ ವಿದ್ಯಾಭ್ಯಾಸ ಶುಲ್ಕದಲ್ಲಿ ಕಡಿತಗೊಳಿಸುವಂತೆ ಬೇಡಿದರೂ ಸ್ಪಂದಿಸಿರಲಿಲ್ಲ. 

ಆದರೆ ಈ ಎರಡೂ ಪ್ರಕರಣಗಳಲ್ಲಿ ಶಾಮನೂರು ಶಿವಶಂಕರಪ್ಪನವರು ಸ್ಪಂದಿಸಿದರು.

ಶಿವಶಂಕರಪ್ಪನವರಲ್ಲಿ ಇರುವ ಒಳ್ಳೆಯ ಗುಣ ಸಿದ್ದೇಶ್ವರ ಅವರಲ್ಲಿ ಇಲ್ಲ. 28 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾದ ನನಗೂ ಬೆಲೆ ನೀಡಲಿಲ್ಲ. ಇನ್ನು ಸಾಮಾನ್ಯ ಕಾರ್ಯಕರ್ತರ ಗತಿ ಏನು? ಎಂದು ಗೋಣೆಪ್ಪ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಟಿ.ರಮೇಶ್, ಬಾಗಳಿ ಉಚ್ಚೆಂಗೆಪ್ಪ, ಬಸವರಾಜ್  ಇತರರಿದ್ದರು.

error: Content is protected !!