ಇತಿಹಾಸ ನೆನಪಿಸಿದ ರಂಗ ಪ್ರಯೋಗಗಳು

ಇತಿಹಾಸ ನೆನಪಿಸಿದ ರಂಗ ಪ್ರಯೋಗಗಳು

ಹರಪನಹಳ್ಳಿ, ಮಾ.31- ಸಮಸ್ತರು (ಹರಪನಹಳ್ಳಿ), ಆದರ್ಶ ಮಹಿಳಾ ಮಂಡಳಿ ಹಾಗೂ ಸಂಪ್ರದಾಯ ಟ್ರಸ್ಟ್ (ಹರಪನಹಳ್ಳಿ) ಇವರ ಸಂಯುಕ್ತ ಆಶ್ರಯದಲ್ಲಿ  ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಾಶೀ ಮಠದ ಸಭಾಂಗಣದಲ್ಲಿ ಎರಡು ಅರ್ಥಪೂರ್ಣ ಪ್ರದರ್ಶನಗಳು ಉತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಹಾಗೆ ನಿಶ್ಯಬ್ಧವಾಗಿ ಚಿಂತನೆಗೆ ಹಚ್ಚಿಸಿದವು. 

ಸಂಪ್ರದಾಯ ಟ್ರಸ್ಟ್ ವತಿಯಿಂದ ಹರಪನಹಳ್ಳಿಯ ಪ್ರಥಮ ಪಾಳೇಗಾರ ದಾದಯ್ಯನಾಯಕ ಪ್ರಯೋಗವಂತು ಹರಪನಹಳ್ಳಿ ಇತಿಹಾಸವನ್ನು ನೆನಪಿಸಿ ಉತ್ಸಾಹ ಹೆಚ್ಚಿಸಿತು. 

ದಾದಯ್ಯ ನಾಯಕಗೆ ಚಿತ್ರದುರ್ಗದ ಮತ್ತಿ ತಿಮ್ಮಣ್ಣ ನಾಯಕ  ಓಲೆ ಕಳಿಸಿ ನಮಗೆ ಬಸವಾಪಟ್ಟಣ ಕೆಂಗಣ್ಣ ನಾಯಕ ಪದೇಪದೇ ದಾಳಿ ಮಾಡುತ್ತಿರುವುದರಿಂದ ನಮ್ಮ ಕೋಟೆಯ ದವಸ ಧಾನ್ಯಗಳು ಖಾಲಿಯಾಗುತ್ತಿರುವುದರಿಂದ ಹೆಚ್ಚು ಕಾಲ ನಮ್ಮಿಂದ ಪ್ರತಿರೋಧ ಒಡ್ಡಲು ನಮಗೆ ಕಷ್ಟಕರವಾಗುತ್ತದೆ.

ಅವನನ್ನು ಹಿಮ್ಮೆಟ್ಟಿಸಲು ಸಮರ್ಥವಾದರೆ ನೀನೇ ದಯವಿಟ್ಟು ನಮ್ಮ ನೆರವಿಗೆ ಬನ್ನಿ ಎಂದು ಓಲೆ ಕಳಿಸಿ ಕೋರಿದ್ದರಿಂದ ದಾದಾಯ್ಯನಾಯಕ ಹರಪನಹಳ್ಳಿ ಯಿಂದ ದವಸ ಧಾನ್ಯ ಹೊತ್ತು ಸೈನ್ಯದೊಂದಿಗೆ ಹೋಗಿ ಹೋರಾಡಿ ಕೆಂಗಣ್ಣನನ್ನು ಹಿಮ್ಮೆಟ್ಟಿಸಿದನು. 

ಈತನ ಪರಾಕ್ರಮ ಮೆಚ್ಚಿ ಅಂದಿನ  ಚಿತ್ರದುರ್ಗದ ತಿಮ್ಮಣ್ಣ ನಾಯಕ ತನ್ನ ಮಗಳಾದ ಹೊನ್ನವ್ವ ನಾಗತಿಯನ್ನು  ವಿವಾಹ ಮಾಡಿಕೊಟ್ಟು ಉಚ್ಚಂಗಿ ದುರ್ಗದ ಕೋಟೆಯನ್ನು ಉಡುಗೊರೆ ಯಾಗಿ ಕೊಟ್ಟರು. ಕಾಲಕಳೆದಂತೆ ತಿಮ್ಮಣ್ಣ ನಾಯಕನ ಮಗ ಕೊಟ್ಟ ಕೋಟೆ ವಾಪಾಸ್ ಪಡೆಯಲು ಸೆಡ್ಡು ಹೊಡೆಯತೊಡಗಿದ ಯುದ್ದ ಆರಂಭವಾಯಿತು. 

ದಾದಯ್ಯ ನಾಯಕನ ಹೆಂಡತಿ ದುಃಖಿತಳಾಗಿ ಅತ್ತ ಸಹೋದರರು ಇತ್ತ ಪತಿ ಇಬ್ಬರ ಕದನ ದಲ್ಲಿ .ಯಾರ ಸಾವು ನಾ ನೋಡಲಾರೇನೆಂದು ತಾನೇ ಉಚ್ಚಂಗಿ ದುರ್ಗದ ಕೋಟೆ ಯಿಂದ ದುಮಿಕಿ ಪ್ರಾಣ ತ್ಯಾಗ ಮಾಡಿಕೊಳ್ಳುತ್ತಾಳೆ. ಯುದ್ಧದಲ್ಲಿ ಯಾವುದೇ ಪ್ರಾಣಹರಣ ಮಾಡದೇ ದಾದಯ್ಯ ಚಿತ್ರದುರ್ಗದ ಸೈನ್ಯವನ್ನು ಕೇವಲ ಹಿಮ್ಮೆಟ್ಟಿಸಿ ಮರಳಿ ದಾಗ ತನ್ನ ಮುದ್ದಿನ ಮಡದಿ ಸಾವನ್ನು ಕಂಡು ಉಚ್ಚೆಂಗಿದೇವಿ  ಮುಂದೆ ರೋಧಿಸುತ್ತಾ. ಅವಳೇ ಇಲ್ಲದ ಮೇಲೆ ಈ ಕೋಟೆಯಲ್ಲಿ ಇರುವುದು ಬೇಡವೆಂದು ಹರಿಪುರಕ್ಕೆ ಬರುತ್ತಾನೆ. 

ಈ ಪ್ರಸಂಗವನ್ನು ರಂಗ ಪ್ರಯೋಗಕ್ಕೆ ಸಿದ್ದ ಪಡಿಸಿಕೊಂಡ ಬಯಲಾಟ ಅಕಾಡೆಮಿ ಸದಸ್ಯರಾದ ಬಿ. ಪರಶುರಾಮ ತಾನೇ ದಾದಯ್ಯನಾಯಕ ಪಾತ್ರ ಮಾಡಿ ಪಾತ್ರಕ್ಕೆ ಜೀವತುಂಬಿ ಪ್ರೇಕ್ಷಕರನ್ನು ಬೆರಗು ಗೊಳಿಸಿದರು.ಹೊನ್ನವ್ವನಾಗತಿ ಪಾತ್ರಧಾರಿ ತಿಮ್ಮಲಾಪುರದ ರಕ್ಷಿತ ರಂಗಭೂಮಿ ಪ್ರವೇಶ ಇದೇ ಪ್ರಢಮವಾಗಿದ್ದರೂ ಉತ್ತಮ ಅಭಿನಯ ನೀಡಿ ಪ್ರೇಕ್ಷಕರನ್ನು ಕಟ್ಟಿಹಾಕುವಂತೆ ಅಭಿನಯಿಸಿದರು. 

ಉಚ್ಚೆಂಗಿ ದೇವಿ ಪಾತ್ರಧಾರಿ ಟಿ.ಐಶ್ಚರ್ಯ, ಸಾಕ್ಷಿಯಾಗಿ ತಿಮ್ಮ ಅಲಾಪುರದ ಐಶ್ಚರ್ಯ ನಟಿಸಿದ್ದರು.  ಬೆಳಕು ಅರುಣ, ಪ್ರಸಾದನ ಶಂಕರ್ ಆರ್ಕಸಾಲಿ ಸಹಾಯಕರಾಗಿ ಕುಮಾರ್, ಆನಂದ, ನಾಗರಾಜ್, ಹೇಮಣ್ಣ, ಮುಂತಾದವರ  ಪರಿಶ್ರಮ ಮೆಚ್ಚಬೇಕು. ಚಾನಪ್ಪ ಅರುಂಡಿ ನಾಗರಾಜ್, ರವಿ ಅಧಿಕಾರ್, ಜೆ.ಸಿಐ ಅಧ್ಯಕ್ಷರಾದ ಪ್ರಿಯಾಂಕ ಅಧಿಕಾರ್ ಮುಂತಾದವರು ಮಾತನಾಡಿ ಪ್ರಯೋಗವನ್ನು ಪ್ರಶಂಸಿಸಿದರು.

error: Content is protected !!