ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

ಹರಿಹರ. ಫೆ.24 – ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ಶಾಲೆಯಿಂದ ಹೊರ ಉಳಿದ ಮಕ್ಕಳನ್ನು ಶಾಲಾ ಮುಖ್ಯ ವಾಹಿನಿಗೆ ತರುವ ಕುರಿತಂತೆ ಮಾಹಿತಿ ಸಂಗ್ರ ಹಣೆಗಾಗಿ ಹಾಗೂ ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೆಷನ್ ನಿರ್ವಹಣೆಗಾಗಿ ಸಮೀಕ್ಷೆ ಕಾರ್ಯವನ್ನು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. 

ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿ/ನೌಕರರಿಗೆ ಅವಶ್ಯವಿರುವ ಮಾಹಿತಿ ಅಂದರೆ ರೇಷನ್‍ಕಾರ್ಡ್, ಆಧಾರ್ ಕಾರ್ಡ್, ಮತ್ತು 18-ವರ್ಷದ ಒಳಗೆ ಇರುವಂತಹ ಮಕ್ಕಳು, ಶಾಲೆಗೆ ಸೇರಿಸಿರುವ ಶಾಲಾ ದೃಢೀಕರಣ ಪತ್ರವನ್ನು ಹಾಜರುಪಡಿಸಿ ಸಿಬ್ಬಂದಿಗಳಿಗೆ ಸಮೀಕ್ಷಾ ಕಾರ್ಯಕ್ಕೆ ಆಯಾ ವ್ಯಾಪ್ತಿಯ ನಗರಸಭಾ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯ ಸದಸ್ಯರುಗಳು, ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಉದಯಕುಮಾರ.ಬಿ.ತಳವಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

error: Content is protected !!