ಬಸವ ಜಯಂತಿ : ನಗರದಲ್ಲಿಂದು ಪ್ರಭಾತ್‌ಪೇರಿ

ಬಸವ ಜಯಂತಿ : ನಗರದಲ್ಲಿಂದು ಪ್ರಭಾತ್‌ಪೇರಿ

ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡುತ್ತಿದೆ.    ಇಂದು ಮುಂಜಾನೆ 7 ಗಂಟೆಗೆ ದೊಡ್ಡಪೇಟೆಯ ಶ್ರೀ ವಿರಕ್ತ ಮಠದಿಂದ ಆರಂಭಗೊಳ್ಳುವ ಪ್ರಭಾತ್‌ಪೇರಿಯು ಕಾಳಿಕಾದೇವಿ ರಸ್ತೆ, ಆನೆಕೊಂಡ ಪೇಟೆ, ಹಳೇಪೇಟೆ, ಎಸ್.ಕೆ.ಪಿ. ರಸ್ತೆ ಮೂಲಕ ವಿರಕ್ತ ಮಠ ತಲುಪಲಿದೆ.

error: Content is protected !!