ಐರಣಿಯಲ್ಲಿ ಇಂದಿನಿಂದ ಅಡ್ಡಪಲ್ಲಕ್ಕಿ, ಮಹಾರಥೋತ್ಸವ, ಅಖಂಡ ಭಜನೆ

ರಾಣೇಬೆನ್ನೂರು ತಾಲ್ಲೂಕಿನ ಐರಣಿ ಮನಿಮಠದ ಶ್ರೀ ಗಜದಂಡಸ್ವಾಮಿಗಳ ಸಾನ್ನಿಧ್ಯದಲ್ಲಿ ಮುಪ್ಪಿನಾರ್ಯರ ನೂತನ ಮಹಾರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ಮತ್ತು ನಾಳೆ ನಡೆಯಲಿವೆ ಎಂದು ಶ್ರೀ ಮಠದ ಭಕ್ತ ಹನುಮಂತಪ್ಪ ಚಳಗೇರಿ ತಿಳಿಸಿದ್ದಾರೆ.

ಇಂದು ಗಜದಂಡ ಶ್ರೀ ಗಳ 31ನೇ ವರ್ಷದ ಪಟ್ಟಾಭಿಷೇಕದ ಸ್ಮರಣೆಗೆ ತುಲಾಭಾರ, ಸಾಮೂಹಿಕ ಮದುವೆಗಳು ನಂತರದಲ್ಲಿ ಧರ್ಮಸಭೆ, ಮಧ್ಯಾಹ್ನ  ಮುಪ್ಪಿನಾರ್ಯರ ನೂತನ ರಥೋತ್ಸವ ನಡೆಯಲಿದೆ. ನಾಳೆ ಬುಧವಾರ ವೀಭೂತಿ ಮತ್ತು ಕವಡಿ  ಪೂಜೆ ನಡೆಯಲಿದೆ ಎಂದು ಹನಮಂತಪ್ಪ ಹೇಳಿದರು.

error: Content is protected !!