ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಅಕ್ಕಮಹಾದೇವಿ ಜಯಂತ್ಯೋತ್ಸವ

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಅಕ್ಕಮಹಾದೇವಿ ಜಯಂತ್ಯೋತ್ಸವ

ಅಕ್ಕಮಹಾದೇವಿ ಸಮಾಜ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಹಾಗೂ ವಚನೋತ್ಸವ ಕಾರ್ಯಕ್ರಮವು ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ   ನಡೆಯಲಿದೆ.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಈಶ್ವರೀಯ ವಿಶ್ವವಿದ್ಯಾಲಯದ  ಸಂಚಾಲಕರಾದ ಬ್ರಹ್ಮಾಕುಮಾರಿ ರಾಜಯೋಗಿನಿ ಲೀಲಾಜಿ ವಹಿಸಲಿದ್ದು, ಸಮಾಜದ ಅಧ್ಯಕ್ಷರಾದ ಕಂಚಿಕೇರಿ ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  

ಮುಖ್ಯ ಅತಿಥಿಗಳಾಗಿ ಡಾ. ಶ್ರೀಮತಿ ಅನುರಾಧ ಬಕ್ಕಪ್ಪ ಉಪಸ್ಥಿತರಿರು ವರು. ಸಮಾಜದ ಉಪಾಧ್ಯಕ್ಷ ರಾದ ಜಯಮ್ಮ ನೀಲಗುಂದ ಪ್ರಾಸ್ತಾವಿಕ ನುಡಿಗಳ್ನಾಡಿದರು. 

ಇದೇ ಸಂದರ್ಭದಲ್ಲಿ ಶ್ರೀ ಅಕ್ಕಮಹಾದೇವಿ ವಧು-ವರರ ಅನ್ವೇಷಣೆ ಕೇಂದ್ರದ ಖಜಾಂಚಿ ಶ್ರೀಮತಿ ಮಾಗಾನಹಳ್ಳಿ ರತ್ನಮ್ಮ ಅವರಿಗೆ ಅಕ್ಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಅಕ್ಕಮಹಾದೇವಿ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ರಾದ ಶ್ರೀಮತಿ ಶೋಭಾ ಸಂಜಯ್ ಕಣವಿ  ಅವರು ಪ್ರಶಸ್ತಿ ಪುರಸ್ಕೃತ ನುಡಿಗಳನ್ನಾಡುವರು.

error: Content is protected !!