ನೇಹ ಹತ್ಯೆ ಪ್ರಕರಣ : ಜಾಮೀನು ಅರ್ಜಿ ಸಲ್ಲಿಸದಂತೆ ವಕೀಲರಲ್ಲಿ ದಿವಾಕರ್ ಮನವಿ

ದಾವಣಗೆರೆ, ಏ. 22 – ಹೆಣ್ಣು ಮಕ್ಕಳ ಮೇಲೆ ಲವ್ ಜಿಹಾದ್ ಹೆಸರಿನಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಮಾನ, ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಅವರನ್ನು 9 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಯ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಮುಖ್ಯ ಕಾರಣ. ಈ ಕೃತ್ಯವನ್ನು ಖಂಡಿಸಿದ್ದಲ್ಲದೆ, ಆತನಿಗೆ ಜಾಮೀನು ಅರ್ಜಿಯನ್ನು ಯಾವ ವಕೀಲರು ಸಲ್ಲಿಸಬಾರದು ಎಂದು ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹಾಗೂ ವಕೀಲರ ಸಹಕಾರ ಸಂಘದ ಅಧ್ಯಕ್ಷ ಹೆಚ್. ದಿವಾಕರ ಆಗ್ರಹಿಸಿದ್ದಾರೆ.

error: Content is protected !!