ನೇಹಾ ಹತ್ಯೆ : ಜಂಗಮ ಸಮಾಜ ಖಂಡನೆ

ದಾವಣಗೆರೆ, ಏ.19-  ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ಕು. ನೇಹಾ  ಅವರ  ಹತ್ಯೆ ಯನ್ನು ಖಂಡಿಸಿರುವ ಜಿಲ್ಲಾ ಜಂಗಮ ಸಮಾಜ, ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.

ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ಬರ್ಬರವಾಗಿ ನೇಹ ಅವರ ಹತ್ಯೆ ಕ್ರೌರ್ಯವಾಗಿದ್ದು, ಇದು ಮಾನವೀಯತೆಯ ಕಗ್ಗೊಲೆಯಾಗಿದೆ ಎಂದು ಜಂಗಮ ಸಮಾಜದ ಮುಖಂಡರೂ ಆದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಎಂ. ರುದ್ರಮುನಿಸ್ವಾಮಿ ಖಂಡಿಸಿದ್ದಾರೆ.

error: Content is protected !!