ಅವೈಜ್ಞಾನಿಕ ರಸ್ತೆ ನಿರ್ಮಾಣ: ಇಂದು ಟೋಲ್ ಮುತ್ತಿಗೆ

ಹರಿಹರ-ಸಮ್ಮಸಗಿ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಅಲ್ಲಿ ಸಂಚರಿಸುವ ವಾಹನಗಳು ಅಪಘಾತಕ್ಕೀಡಾಗಿ ಅನೇಕ ಸಂಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ವಿಕಲಾಂಗಿಗಳಾಗಿದ್ದಾರೆ. 

ಈ ಬಗ್ಗೆ ಅನೇಕ ಬಾರಿ ಟೋಲ್ ಅಧಿಕಾರಿಗಳಿಗೆ ತಿಳಿಸಿದರೂ ಸಹ ನಿರ್ಲಕ್ಷ ವಹಿಸುತ್ತಿದ್ದು ಇಂದು ಹೆಡಿಯಾಲ ಟೋಲ್ ಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.

error: Content is protected !!