ರಾಮನವಮಿ : ನಾಳೆ ಅಭಿಷೇಕ, ಪಾನಕ-ಕೋಸಂಬರಿ ವಿತರಣೆ

ರಾಮನವಮಿ : ನಾಳೆ ಅಭಿಷೇಕ, ಪಾನಕ-ಕೋಸಂಬರಿ ವಿತರಣೆ

ದಾವಣಗೆರೆ, ಏ. 15- ಶ್ರೀ ರಾಮಮಂದಿರ ಸೇವಾ ಸಮಿತಿ ಸದಸ್ಯರು ಹಾಗೂ ದಾವಣಗೆರೆ ಯೋಗ ಬಂಧುಗಳು ಹಾಗೂ ಶ್ರೀ ರಾಮ ಭಕ್ತರ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 17ರ ಬುಧವಾರ  ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 7 ರಿಂದ 9ರವರೆಗೆ ಶ್ರೀ ರಾಮ ಭಕ್ತರಿಂದ ಉತ್ಸವ ಮೂರ್ತಿಗೆ ಕ್ಷೀರಾಭಿಷೇಕ, ಬೆಳಿಗ್ಗೆ 9 ರಿಂದ 11ರವರೆಗೆ ಶ್ರೀ ರಾಮ ತಾರಕ ಹೋಮ, ಬೆಳಿಗ್ಗೆ 11 ರಿಂದ 11.30ರವರೆಗೆ ಶ್ರೀರಾಮ ಮೂರ್ತಿಗೆ ತೊಟ್ಟಿಲು ಸೇವೆ ನೆರವೇರುವುದು.

ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ ಶ್ರೀ ರಾಮನವಮಿ ಮತ್ತು ಲೋಕಕಲ್ಯಾಣಕ್ಕಾಗಿ ಭಜನಾ ಗ್ರೂಪ್ ಸದಸ್ಯರಿಂದ ಶ್ರೀ ರಾಮಭಜನೆ ಕಾರ್ಯಕ್ರಮ ನಡೆಯಲಿದೆ. 

ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಗುವುದು. ರಾತ್ರಿ 8 ರಿಂದ ಪ್ರಭು ಶ್ರೀರಾಮನಿಗೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮ ಮಂದಿರ ಸೇವಾ ಸಮಿತಿ ತಿಳಿಸಿದೆ.

error: Content is protected !!