ಚೀಲೂರಲ್ಲಿ ಇಂದು ಗಜಾರೋಹಣ

ನ್ಯಾಮತಿ ತಾಲ್ಲೂಕಿನ  ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವಾಲಯದ ಪ್ರವೇಶೋತ್ಸವ, ಕಳಸಾರೋಹಣ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ಇಂದಿನಿಂದ ಇದೇ ದಿನಾಂಕ 17 ರವರೆಗೆ ಜರುಗಲಿವೆ. ಇಂದು ಗಜಾರೋಹಣ ಮಹೋತ್ಸವ ಜರುಗಲಿವೆ. ನಾಳೆ ಮಂಗಳವಾರ ಬೆಳಿಗ್ಗೆ 5 ಕ್ಕೆ ಶ್ರೀ ಸ್ವಾಮಿಯ ರುದ್ರಾಭಿಷೇಕ, ಕೆಂಡದಾರ್ಚನೆ, ನಾಗದೇವರ ಪೂಜೆ, ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಧೂಳ್‌ ಅರ್ಚನೆ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 17 ರ ಬುಧವಾರ ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ, ಸಂಜೆ ಓಕುಳಿ ನಡೆಯಲಿವೆ.

error: Content is protected !!